ವಿಜಯಪುರ: ರಾಜ್ಯಾದ ಹಲವೆಡೆ ಬಿರುಸಾಗಿ ಬಂದ ವರುಣ ಧರೆಯನ್ನು ತಂಪಾಗಿಸಿದ್ದಾನೆ. ಬಿರುಬಿಸಿಲಿನ ನಡುವೆ ವರುಣನ ಆಗಮನದಿಂದ ಜನ ಸಂತಸಗೊಂಡಿದ್ದಾರೆ. ಇಂತಹ ಸಮಯದಲ್ಲಿ ತಾಲೂಕು, ತಿಕೋಟ ಗ್ರಾಮದಲ್ಲಿ ಮಳೆ ತಂಪೆರೆದಿದ್ದು,ಇಂಡಿ ತಾಲೂಕಿನ ಮಾವಿನಹಳ್ಳಿಯಲ್ಲಿ ಸಿಡಿಲು ಬಡಿದು ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಬೀರಪ್ಪ ನಿಂಗಪ್ಪ ಅವರಾದಿ(16) ಮೃತ ರ್ದುದೈವಿ. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.