ಕಲಬುರಗಿ: ಆಳಂದ ಬಿಜೆಪಿ ಕಾರ್ಯಕರ್ತ ಮಹಾಂತಪ್ಪ ಆಲೂರೆ ಹತ್ಯಗೈದಿದ್ದ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ. ಮಾದನಹಿಪ್ಪರಗಾ ಪೊಲೀಸರಿಂದ ಮೂವರ ಬಂಧನವಾಗಲಿದೆ.
ಅಜಿತ್ ಕುಮಾರ್ ಕ್ಷೇತ್ರಿ (29), ಆಕಾಶ್ ಕಾಮಠಿ (29), ಮೂಯೂರ್ ಕ್ಷೇತ್ರಿ (25) ಬಂಧಿತರು. ಫೆಬ್ರವರಿ 29 ರಂದೇ ಆಳಂದ ತಾಲೂಕಿನ ಸರಸಂಬಾ ಹೊರವಲಯದಲ್ಲಿ ಹತ್ಯೆ ಮಾಡಲಾಗಿತ್ತು.
ಹಳೇ ವೈಷ್ಯಮ್ಯ ಹಿನ್ನಲೆ ಸರಸಂಬಾ ಗ್ರಾಮ ಅಜಿತ್ನಿಂದಲೇ ಕೊಲೆಯಾಗಿದ್ದರು ಮಹಾಂತಪ್ಪ ಆಲೂರೆ. ಕೊಲೆ ಮಾಡೋದಕ್ಕಾಗಿ ಪುಣೆಯಿಂದ ಸ್ನೇಹಿತನನ್ನ ಕರೆಯಿಸಿದ್ದ ಅಜಿತ್, ಕಾರು ಡಿಕ್ಕಿ ಹೊಡೆಸಿ, ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣ ಸಹ ಸಾಕಷ್ಟು ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು.