ಕೋಡಿಮಠದ ಶ್ರೀ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಆಂಧ್ರಪ್ರದೇಶ: ತಿರುಪತಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಿರುವ ಬಗ್ಗೆ ಇದೀಗ ಕೋಡಿಮಠದ ಶ್ರೀಗಳು ಪ್ರತಿಕ್ರಿಯಿಸಿದ್ದು, ನಾಲ್ಕು ವರ್ಷದಿಂದ ಕೋಟ್ಯಂತರ ಭಕ್ತರು ಲಡ್ಡು ತಿಂದಿದ್ದಾರೆ ಅವರ ಹೊಟ್ಟೆಗೆ ಏನು ಮಾಡೋದು ಎಂದು ಪ್ರಶ್ನಿಸಿದರು.

ಈ ಬಗ್ಗೆ ಮಾತನಾಡಿದ ಶ್ರೀಗಳು, ತಿರುಪತಿ ದೇವಸ್ಥಾನಕ್ಕೆ ಬರುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿ ಕಲಬೆರಕೆಯಾಗಿದೆ ಎಂದು ತಿರುಪತಿಯಲ್ಲಿ ಕೃಷ್ಣ-ವೆಂಕಟೇಶ್ವರ ಇದ್ದ ಸ್ಥಳ ಸ್ವಚ್ಛತೆ ಮಾಡುತ್ತಿದ್ದಾರೆ. ಅಶುದ್ಧವಾಗಿದೆ ಅದಕ್ಕೆ ಸ್ಥಳ ಸ್ವಚ್ಛತೆ ಮಾಡುವುದು ಧರ್ಮಶಾಸ್ತ್ರ ಎಂದರು.

ದೇವಸ್ಥಾನ ಅಶುದ್ಧವಾಗಿದೆ ಎಂದು ಸ್ಥಳ ಸ್ವಚ್ಚ ಏನೋ ಮಾಡಿದ್ದಾರೆ ಆದರೆ ಕಳೆದ ನಾಲ್ಕು ವರ್ಷದಿಂದ ದೇವಸ್ಥಾನದಲ್ಲಿ ಕೋಟ್ಯಂತರ ಭಕ್ತರು ಲಡ್ಡು ಪ್ರಸಾದವನ್ನು ತಿಂದು ಬಿಟ್ಟಿದಾರಲ್ಲ.? ಅವರ ಹೊಟ್ಟೆಗೆ ಏನು ಮಾಡೋದು ಎಂದು ಆಂದ್ರ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *