ದೇಶದ್ರೋಹಿಗಳನ್ನು ಬಂಧಿಸಬಾರದು, ಗುಂಡಿಕ್ಕಿ ಕೊಲ್ಲಬೇಕು- ಪ್ರಮೋದ್ ಮುತಾಲಿಕ್

ಕೋಲಾರ: ದೇಶದ್ರೋಹಿಗಳನ್ನು ಬಂಧಿಸಬಾರದು ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಬಗ್ಗೆ ಕೋಲಾರದಲ್ಲಿ ಮಾತನಾಡಿದ ಅವರು, ದೇಶದ್ರೋಹ ಕ್ಯಾನ್ಸರ್ ಇದ್ದಹಾಗೆ. ಅದಕ್ಕೆ ಔಷಧ ಇಲ್ಲ, ಮುಲಾಮಿಲ್ಲ. ಅದನ್ನು ಆಪರೇಷನ್ ಮಾಡಬೇಕು. ಇಲ್ಲವಾದರೆ ದೇಶದ ತುಂಬ ಹರಡುತ್ತದೆ ಎಂದು ಹೇಳಿದರು.

ಮುಸ್ಲಿಂರಿಂದಲೇ ಗೆದ್ದಿದ್ದೇವೆ ಅನ್ನೋ ಸೊಕ್ಕು, ಅಹಂಕಾರದಿಂದಲೇ ಅವರು ಏನು ಬೇಕಾದರೂ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಉದಾಹರಣೆಗೆ ಹಿಜಾಬ್ ಹಾಕಿಕೊಳ್ಳಿ ಎನ್ನುತ್ತಾರೆ. ಯಾಕೆ ಹಾಕಿಕೊಳ್ಳಬೇಕು ಎಂದರೆ, ಸುಪ್ರೀಂಕೋರ್ಟ್​ನಿಂದ ತೀರ್ಪು ಬಂದಿಲ್ಲ ಎನ್ನುತ್ತಾರೆ. ಸಮಾನತೆ ಬಗ್ಗೆ ಮಾತನಾಡುವ ನೀವು ಹಿಜಾಬ್ ಹಾಕಿಕೊಳ್ಳಿ ಎಂದರೆ ಸಮಾನತೆ ಎಲ್ಲಿ ಬರುತ್ತದೆ. ಹುಬ್ಬಳ್ಳಿಯಲ್ಲಿ 10 ಸಾವಿರ ಕೋಟಿ ಮುಸ್ಲಿಂ ಅಭಿವೃದ್ದಿಗೆ ಕೊಟ್ಟಿದ್ದೇನೆ ಎಂದು ಹೇಳುತ್ತಾರೆ. ಮುಸ್ಲಿಂ ಕುಮ್ಮುಕ್ಕು ಸಿಗುತ್ತಿರುವುದರಿಂದ ವಿಧಾನಾಸೌಧ ಒಳಗೆ ಪಾಕಿಸ್ತಾನ ಜಿಂದಾಬಾದ್ ಎನ್ನುವ ಸೊಕ್ಕು ಕಿಡಿಗೇಡಿಗಳಿಗೆ ಬಂದಿದೆ‌ ಎಂದು ಹೇಳಿದರು.

Font Awesome Icons

Leave a Reply

Your email address will not be published. Required fields are marked *