ಬೆಂಗಳೂರಿನಲ್ಲಿ ಮಳೆ ಹಾನಿ: ಸಿಎಂ ಕೂಡಲೇ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಿ- ಆರ್.ಅಶೋಕ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ಅಕ್ಟೋಬರ್,21,2024 (www.justkannada.in):  ಬೆಂಗಳೂರಿನಲ್ಲಿ ಮಳೆ ಹಾನಿ ಹಿನ್ನೆಲೆಯಲ್ಲಿ  ಕೂಡಲೇ ಸಿಎಂ ಸಿದ್ದರಾಮಯ್ಯ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಬೆಂಗಳೂರಿನಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಆರ್.ಅಶೋಕ್ ಪರಿಶೀಲಿಸಿದರು.  ಸಿಲ್ಕ್ ಬೋರ್ಡ್  ಜಂಕ್ಷನ್ ಬಳಿ ಪರಿಶೀಲಿಸಿ ನಂತರ ಮಾತನಾಡಿದ ಆರ್.ಅಶೋಕ್, ಇದು ಮುಳುಗುತ್ತಿರುವ ಬೆಂಗಳೂರು ಅಲ್ಲ ತೇಲುತ್ತಿರುವ ಬೆಂಗಳೂರು.  ಇಡೀ ದೇಶದಲ್ಲಿ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.

ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದಲ್ಲಿ ಬೆಳೆ ಹಾನಿಯಾಗಿದೆ. ಕೂಡಲೇ ಸಿಎಂ ಸಿದ್ದರಾಮಯ್ಯ ಜಿಲ್ಲಾ ಮಟ್ಟದ ಸಭೆ ಕರೆದು ಕೇಳಬೇಕು.  ಮಳೆ ಹಾನಿ ಕುರಿತು ಸಿಎಂ ಸಿದ್ದರಾಮಯ್ಯ ಚರ್ಚಿಸಿಲ್ಲ. ಬೆಂಗಳೂರಿಗೆ ಕೂಡಲೇ 1 ಸಾವಿರ ಕೋಟಿ ರೂ ಹಣ ಬಿಡುಗಡೆ ಮಾಡಬೇಕು. ಖಜಾನೆ ಖಾಲಿಯಾಗಿದ್ದರೇ 500 ಕೋಟಿ ರೂ.ನಾದರೂ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮಾನ್ಯತಾ ಟೆಕ್ ಪಾರ್ಕ್ ಮುಳುಗಡೆ  ಪಾರ್ಕ್ ಅಂತಾ ಬ್ರ್ಯಾಂಡ್ ಆಗಿದೆ. ಆದರೂ ಯಾವುದೇ ಮಂತ್ರಿ ಭೇಟಿ ನೀಡಿಲ್ಲ ಎಂದು ಆರ್ ಅಶೋಕ್ ಕಿಡಿಕಾರಿದರು.

Key words: Rain, Bengaluru: CM, 1 thousand crore, release,  R.Ashok

Font Awesome Icons

Leave a Reply

Your email address will not be published. Required fields are marked *