ಸೇವಾ ಕಾರ್ಯಕ್ಕೆ ಜನಮನ್ನಣೆ ಪಡೆದ ಕುಳೂರು, ಕಾವೂರು ಬಸ್ ಚಾಲಕ ನಿರ್ವಾಹಕರು ಹಾಗೂ ಸಮಯ ಪರಿಪಾಲಕರು

ಮಂಗಳೂರು: ರೂಟ್ ನಂಬರ್ 13 b ಕುಳೂರು ಕಾವೂರು ಬಸ್ ಚಾಲಕ ನಿರ್ವಾಹಕರು ಹಾಗೂ ಸಮಯ ಪರಿಪಾಲಕರು ವಾಟ್ಸ್ ಅಪ್ ಗ್ರೂಪ್ ಮಾಡಿಕೊಂಡಿದ್ದು ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದ್ದು ಈ ಬಾರಿ ಹದಗೆಟ್ಟ ರಸ್ತೆಯನ್ನ ಶ್ರಮದಾನ ಮಾಡುವ ಮೂಲಕ ಮತ್ತೆ ಸುದ್ದಿ ಮಾಡಿದ್ದಾರೆ.

೨

ರಸ್ತೆ ಗುಂಡಿ ಮುಚ್ಚಲು ಜಾಗೃತಿಗಾಗಿ, ಹದಗೆಟ್ಟ ರಸ್ತೆ ದುರಸ್ತಿ ಗಾಗಿ ರಸ್ತೆ ಗುಂಡಿ ಸುತ್ತಲು ಕಾನ್ಕ್ರೆಟ್ ನಿಂದ ಮುಚ್ಚಿ ಜನಪ್ರತಿನಿಧಿಗಳು, ಸರಕಾರದ ಗಮನ ಸೆಳೆಯಲು ಕುಳೂರ್ ಕಾವುರ್ ರೂಟಿನ ಚಾಲಕರು ನಿರ್ವಾಹಕರು ಸಮಯ ಪರಿಪಾಲಕರು ಇಂದು ಶ್ರಮದಾನ ಮಾಡಿದರು.

೧

ಹಿಂದಿನಿಂದಲೂ ತನ್ನ ದೈನಂದಿನ ಕೆಲಸದ ಒತ್ತಡದ ನಡುವೆ ಸಾಮಾಜಿಕ ಕೆಲಸಕ್ಕೆ ಮನ್ನಣೆ ನೀಡಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಸ್ ಶ್ರಮಿಕರ ಮಾನವೀಯ ಗುಣಗಳಿಗೆ ಕೈಗನ್ನಡಿ ಯಾದಂತಿದೆ, ಈ ಬಾರಿ ವಿಪರೀತ ಮಳೆ ಇಂದ ಜಿಲ್ಲೆಯದಾಂತ್ಯ ಪ್ರಮುಖ ರಸ್ತೆ ಹಾಳಾಗಿದ್ದು ಇಂದಿಗೂ ವಾಹನ ಸವಾರರು ರಸ್ತೆಯಲ್ಲಿ ಪರದಾಡುತ್ತಿದ್ದಾರೆ.

Font Awesome Icons

Leave a Reply

Your email address will not be published. Required fields are marked *