ಮಂಗಳೂರು: ರೂಟ್ ನಂಬರ್ 13 b ಕುಳೂರು ಕಾವೂರು ಬಸ್ ಚಾಲಕ ನಿರ್ವಾಹಕರು ಹಾಗೂ ಸಮಯ ಪರಿಪಾಲಕರು ವಾಟ್ಸ್ ಅಪ್ ಗ್ರೂಪ್ ಮಾಡಿಕೊಂಡಿದ್ದು ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದ್ದು ಈ ಬಾರಿ ಹದಗೆಟ್ಟ ರಸ್ತೆಯನ್ನ ಶ್ರಮದಾನ ಮಾಡುವ ಮೂಲಕ ಮತ್ತೆ ಸುದ್ದಿ ಮಾಡಿದ್ದಾರೆ.
ರಸ್ತೆ ಗುಂಡಿ ಮುಚ್ಚಲು ಜಾಗೃತಿಗಾಗಿ, ಹದಗೆಟ್ಟ ರಸ್ತೆ ದುರಸ್ತಿ ಗಾಗಿ ರಸ್ತೆ ಗುಂಡಿ ಸುತ್ತಲು ಕಾನ್ಕ್ರೆಟ್ ನಿಂದ ಮುಚ್ಚಿ ಜನಪ್ರತಿನಿಧಿಗಳು, ಸರಕಾರದ ಗಮನ ಸೆಳೆಯಲು ಕುಳೂರ್ ಕಾವುರ್ ರೂಟಿನ ಚಾಲಕರು ನಿರ್ವಾಹಕರು ಸಮಯ ಪರಿಪಾಲಕರು ಇಂದು ಶ್ರಮದಾನ ಮಾಡಿದರು.
ಹಿಂದಿನಿಂದಲೂ ತನ್ನ ದೈನಂದಿನ ಕೆಲಸದ ಒತ್ತಡದ ನಡುವೆ ಸಾಮಾಜಿಕ ಕೆಲಸಕ್ಕೆ ಮನ್ನಣೆ ನೀಡಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಸ್ ಶ್ರಮಿಕರ ಮಾನವೀಯ ಗುಣಗಳಿಗೆ ಕೈಗನ್ನಡಿ ಯಾದಂತಿದೆ, ಈ ಬಾರಿ ವಿಪರೀತ ಮಳೆ ಇಂದ ಜಿಲ್ಲೆಯದಾಂತ್ಯ ಪ್ರಮುಖ ರಸ್ತೆ ಹಾಳಾಗಿದ್ದು ಇಂದಿಗೂ ವಾಹನ ಸವಾರರು ರಸ್ತೆಯಲ್ಲಿ ಪರದಾಡುತ್ತಿದ್ದಾರೆ.