ತಿರುವನಂತಪುರಂ: ಹಸಿವು ತಾಳಲಾರದೇ ಯುವಕನೋರ್ವ ಬೆಕ್ಕಿನ ಮಾಂಸ ಸೇವಿಸಿದ ವಿಚಿತ್ರ ಘಟನೆ ಕೇರಳ ಜಿಲ್ಲೆಯ ಕುಟ್ಟಿಪುರಂನಲ್ಲಿ ನಡೆದಿದೆ. ಕುಟ್ಟಿಪುರಂನ ಜನನಿಬಿಡ ಪ್ರದೇಶದಲ್ಲಿರೋ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬೆಕ್ಕಿನ ಮಾಂಸ ಸೇವಿಸಿದ ಯುವಕ ಅಸ್ಸಾಂನ ದುಬ್ರಿ ಜಿಲ್ಲೆಯ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಈತ ಐದು ದಿನಗಳಿಂದ ಹಸಿವಿನಿಂದ ಕಂಗೆಟ್ಟಿದ್ದ ಯುವಕನಿಗೆ ತಿನ್ನಲು ಏನೂ ಸಿಗದ ಕಾರಣ ಬೆಕ್ಕಿನ ಹಸಿ ಮಾಂಸವನ್ನೇ ತಿಂದಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಪೊಲೀಸರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ.
ಕೂಡಲೇ ಘಟನಾ ಸ್ಥಳಕ್ಕೆ ಆಗಮನಿಸಿ ಪೊಲೀಸ ಅಧಿಕಾರಿಗಳು ಆತನ ಬಗ್ಗೆ ವಿಚಾರಣೆ ನಡೆಸಿದಾಗ ಆತ ಕಳೆದ 5 ದಿನಗಳಿಂದ ಏನನ್ನೂ ತಿಂದಿಲ್ಲ ಎಂದು ತಿಳಿಸಿದ್ದಾನೆ. ಆತ ಆತ ಅಸ್ಸಾಂನ ಕಾಲೇಜು ವಿದ್ಯಾರ್ಥಿ ಕುಟುಂಬಕ್ಕೆ ಮಾಹಿತಿ ನೀಡದೆ ಆತ ಡಿಸೆಂಬರ್ನಲ್ಲಿ ರೈಲಿನಲ್ಲಿ ಕೇರಳಕ್ಕೆ ತಲುಪಿದ್ದ ಎಂಬುದು ಆತನ ಹೇಳಿಕೆಯಿಂದ ತಿಳಿದು ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಯುವಕನ್ನು ತ್ರಿಶೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
shocking incident, a man hailing from #Assam in Kuttippuram in this north Kerala district was found consuming the raw flesh of a cat, after having had no means to consume food for days. pic.twitter.com/YxbHHrwdzz
— nihal (@nihalnio) February 4, 2024