ತುಂಡು ತುಂಡಾಗಿ ಕೊಲೆಯಾದ ವೃದ್ಧೆ ಪ್ರಕರಣ: ಓರ್ವ ವಶಕ್ಕೆ

ಬೆಂಗಳೂರು: ನಗರದ ಕೆ.ಆರ್‌ ಪುರಂನಲ್ಲಿ ತಂಡು ತುಂಡಾಗಿ ಕೊಲೆಯಾದ ವೃದ್ಧೆ ಬಿಜೆಪಿ ಕಾರ್ಯಕರ್ತೆ ಎಂದು ಈಗಾಗಲೆ ಅಧಿಕಾರಿಗಳು ತಿಳಿಸಿದ್ದರು. ಮೃತ ಸುಶೀಲಮ್ಮ ಮೂಲತಃ ಚಿಕ್ಕಬಳ್ಳಾಪುರದವರಾಗಿದ್ದು, ಬೆಂಗಳೂರಿನಲ್ಲಿ ನೆಲಸಿದ್ದರು.

ತನ್ನ ಸಂಪೂರ್ಣ ಆಸ್ತಿ ಮಾರಾಟ ಮಾಡಿ ಬಂದ ಹಣದಿಂದ ಮನೆ ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು ಹಾಗೂ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇರುವುದಾಗಿ ತಿಳಿದು ಬಂದಿದೆ. ಆದರೆ ವೃದ್ಧೆ ಮಕ್ಕಳಿಂದ ಪ್ರತ್ಯೇಕವಾಗಿ ವಾಸವಾಗಿದ್ದರು.

ಸುಶೀಲಮ್ಮನ ಮಗ ಅವರಿಗೆ ಪ್ರತೀ ತಿಂಗಳು ಖರ್ಚಿಗೆಂದು ಹಣ ಕಳುಹಿಸುತ್ತಿದ್ದರು. ಆದರೆ ಕೆಲವೊಮ್ಮೆ ಸುಶೀಲಮ್ಮ ಮನೆಯಿಂದ ಹೊರ ಹೊರಟರೆ ಎರಡು ಮೂರು ದಿನಗಳ ನಂತರ ಹಿಂತಿರುಗುವುದು ಅವರ ಅಭ್ಯಾಸವಾಗಿತ್ತು.  ಹೀಗಾಗಿ ಮಕ್ಕಳು ಹಾಗೂ ಸಮೀಪದ ಮನೆಯವರು ಅವರ ಕಾಣೆಯ ಕುರಿತು ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಈ ಕಾರಣ ವೃದ್ಧೆಯ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Read more:

ತುಂಡು, ತುಂಡಾದ ವೃದ್ಧೆಯ ಮೃತದೇಹ ಡ್ರಮ್ ನಲ್ಲಿ ಪತ್ತೆ!

Font Awesome Icons

Leave a Reply

Your email address will not be published. Required fields are marked *