ಉಪರಾಷ್ಟ್ರಪತಿ ದಂಪತಿ, ರಾಜ್ಯಪಾಲರಿಗೆ ಅದ್ದೂರಿ ಸ್ವಾಗತ ಮಾಡಿದ ಜೋಶಿ ದಂಪತಿ

ಹುಬ್ಬಳ್ಳಿ: ಧಾರವಾಡ ಐಐಐಟಿಗೆ ಆಗಮಿಸಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ದಂಪತಿ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಗೃಹಕ್ಕೆ ತೆರಳಿ ಔತಣ ಸ್ವೀಕರಿಸಿದರು. ಹುಬ್ಬಳ್ಳಿಯಲ್ಲಿನ ಮನೆಗೆ ಧಾವಿಸಿದ ಉಪರಾಷ್ಟ್ರಪತಿ ದಂಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರನ್ನು ಜೋಶಿ ದಂಪತಿ ಆರತಿ ಬೆಳಗಿ ಆತ್ಮೀಯ, ಆದರದಿಂದ ಬರಮಾಡಿಕೊಂಡರು.

ಕೇಂದ್ರ ಸಚಿವ ಜೋಶಿ ಅವರ ಮನೆಯಲ್ಲಿ ಧಾರವಾಡ ಫೇಡಾ ಸಿಹಿ ಸವಿದ ಉಪರಾಷ್ಟ್ರಪತಿ ದಂಪತಿ ಅತೀವ್ರ ಸಂತಸ ವ್ಯಕ್ತಪಡಿಸಿದರು. ಸಚಿವ ಪ್ರಹ್ಲಾದ ಜೋಶಿ ಕುಟುಂಬದ ಸದಸ್ಯರೊಂದಿಗೆ ಬೆರೆತು ಲಘು ಉಪಹಾರ ಸ್ವೀಕರಿಸಿದ ಉಪರಾಷ್ಟ್ರಪತಿ ಬಳಿಕ ಸಾಮಾನ್ಯರಂತೆ ಬಿಜೆಪಿ ಕಾರ್ಯಕರ್ತರೊಂದಿಗೆ ಕೆಲ ಸಮಯ ಕಳೆದಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್, ವಿಧಾನಪರಿಷತ್‌ ಅಧ್ಯಕ್ಷ ಬಸವರಾಜ ಹೊರಟ್ಟಿ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಉಪರಾಷ್ಟ್ರಪತಿ ಅವರಿಗೆ ಸಾಥ್ ನೀಡಿದರು.

Font Awesome Icons

Leave a Reply

Your email address will not be published. Required fields are marked *