ಪಾಕ್ ಪರ ಘೋಷಣೆ,  ಬಾಂಬ್ ಸ್ಪೋಟ ಇದು ಭಯೋತ್ಪಾದಕರ ಕೃತ್ಯ ಅಲ್ಲದೆ ಮತ್ತೇನು..? ಕೆ.ಎಸ್ ಈಶ್ವರಪ್ಪ ಕಿಡಿ.. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

website developers in mysore

ಮೈಸೂರು,ಮಾರ್ಚ್,2,2024(www.justkannada.in): ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಮತ್ತು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಇದು ಭಯೋತ್ಪಾದಕರ ಕೃತ್ಯ ಅಲ್ಲದೆ ಮತ್ತೇನು..?  ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ ಕಾರಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಮೊದಲು ಡಿ.ಕೆ ಶಿವಕುಮಾರ್ ಬಾಯಿಗೆ ಬೀಗ ಹಾಕಿ. ಡಿ.ಕೆ‌ ಶಿವಕುಮಾರ್ ಬಾಯಿಗೆ ಬಂದಂತೆ ಹೇಳಿಕೆ‌ ಕೊಡುತ್ತಿದ್ದಾರೆ. ಮೊದಲು ಅದನೆಲ್ಲಾ ನಿಲ್ಲಿಸಿ. ಡಿ.ಕೆ ಭಯೋತ್ಪಾದಕರ ಪರ ಎಂಬುದು ನಮಗೆ ಗೊತ್ತಾಗಿದೆ. ಅವರ ಮೇಲೆ ನಮಗೆ ಯಾವ ನಂಬಿಕೆಗಳು ಉಳಿದಿಲ್ಲ. ಅವರು ಹೇಳಿದನ್ನು ಜನ ಕೇಳಬೇಕು ಅಂಥ ಏನು ಇಲ್ಲ ಎಂದು  ವಾಗ್ದಾಳಿ ನಡೆಸಿದರು.

ಬಾಂಬ್ ಸ್ಪೋಟ ಹಾಗೂ ಪಾಕಿಸ್ತಾನ್ ಜಿಂದಾಬಾದ್ ವಿಚಾರ, ಇದು ಭಯೋತ್ಪಾದಕರ ಕೃತ್ಯ ಅಲ್ಲದೆ ಮತ್ತೇನು. ಏನೂ ಹೋಟೆಲ್ ನಲ್ಲಿ ಯಾರೋ ಮಕ್ಕಳು ಪಟಾಕಿ ಹೊಡೆದಿದ್ದಾರಾ? ಅಥವಾ ಬಲೂನ್ ಹೊಡೆದಿದ್ದಾರಾ? ಅಲ್ಲಿ ಆಗಿರುವುದು ಬಾಂಬ್ ಸ್ಪೋಟ.ಇದು ಭಯೋತ್ಪಾದಕರ ಕೃತ್ಯ. ಇದು ಗುಪ್ತಚರ ಇಲಾಖೆಯ ವೈಫಲ್ಯ. ಈ ವೈಫಲವ್ಯವನ್ನ ಸಿಎಂ ಮೊದಲು ಒಪ್ಪಿಕೊಳ್ಳಬೇಕು. ಭಯೋತ್ಪಾದಕರನ್ನ ಮೊದಲು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ,  ಮೊದಲು ಎಫ್ಎಸ್ಎಲ್ ವರದಿ ಬಹಿರಂಗ ಮಾಡಿ. ನೀವು ತಡ ಮಾಡಿದಷ್ಟು ನೀವು ವರದಿ ತಿರುಚುತ್ತಿದ್ದಾರೆ ಎಂಬ ಅನುಮಾನ ಜಾಸ್ತಿಯಾಗುತ್ತೆ. ವರದಿ ಬರುವ ಮುನ್ನವೇ ಕೆಲ ಸಚಿವರು ಅಂತಹ ಘಟನೆ ನಡೆದೇ ಇಲ್ಲ ಎಂದಿದ್ದಾರೆ. ಹೀಗಾಗಿ ವರದಿಗೆ ಏನು ಬೆಲೆ. ನಮ್ಮ ಪ್ರಕಾರ ಎಫ್ಎಸ್ಎಲ್ ವರದಿ ಬಂದಿದೆ. ಸರ್ಕಾರ ಅದನ್ನ ಮುಚ್ಚಿಡುವ ಯತ್ನ ಮಾಡುತ್ತಿದೆ. ಜನ ನಿಮ್ಮ ವರದಿ ಬಿಡುಗಡೆಗೆ ಕಾಯುತ್ತಿದ್ದಾರೆ. ನೀವು ಮುಸ್ಲೀಂ ಪರವಾಗಿಯೇ ಇರಿ. ಆದರೆ ಭಯೋತ್ಪಾದಕ ಚಟುವಟಿಕೆ ನಡೆಸುವವರನ್ನ ದೇಶ ದ್ರೋಹಿಗಳನ್ನ ರಕ್ಷಿಸ ಬೇಡಿ ಎಂದು ಸಲಹೆ ನೀಡಿದರು.

ಜಾತಿಜನಗಣತಿ ವರದಿ ಸಲ್ಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಸಿಎಂಗೆ ತಾಕತ್ ಇದ್ದರೆ ಜಾತಿಗಣತಿಯನ್ನ ಸಂಪುಟದಲ್ಲಿ ಇಡಲಿ. ವಿಧಾನಸೌಧದಲ್ಲಿ ಚರ್ಚೆಗೆ ಇಡಲಿ. ಕಾಂಗ್ರೆಸ್ ನವರೇ ಪರಸ್ಪರ ಹೊಡೆದಾಡಿಕೊಳ್ಳದಿದ್ದರೆ ನೋಡಿ. ಜಾತಿ ಜಾತಿಗಳ ನಡುವೆ ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ‌. ಹಿಂದುಳಿದ ವರ್ಗಗಳ ಚಾಂಪಿಯನ್ ಎನ್ನಿಸಿಕೊಳ್ಳಲು ಹಿಂದು ಸಮಾಜವನ್ನ ಜಾತಿ ಹೆಸರಿನಲ್ಲಿ ಹೊಡೆಯುತ್ತಿದ್ದಾರೆ. ನೀವು ಮುಸ್ಲೀಂರ ಪರ ಇರಿ. ಬಿಜೆಪಿ ಹಿಂದೂಗಳ ಪರ ಇರುತ್ತದೆ ಎಂದರು.

ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 50 ಕೋಟಿ ಆಫರ್  ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಗರಂ ಆದ ಈಶ್ವರಪ್ಪ, ಸಿಎಂ 50 ಕೋಟಿ ರೂ.  ಆಫರ್ ಕೊಟ್ಟಿದ್ದು ಯಾರು ಎಂಬುದನ್ನ ಹೇಳಲಿ. 50 ಕೋಟಿ ರೂ.  ಆಫರ್ ಕೊಟ್ಟವರನ್ನು ಮೊದಲು ಜೈಲಿಗೆ ಕಲುಹಿಸಲಿ. ಇಲ್ಲದಿದ್ದರೆ ನಾನು ರಾಜಕೀಯಕ್ಕಾಗಿ ಸುಳ್ಳು ಹೇಳಿದ್ದೇನೆ ಎಂದು ಜನರ ಕ್ಷಮೆ ಕೇಳಲಿ. ಸಿಎಂ ಬಾಯಲ್ಲಿ ಈ ರೀತಿಯ ಮಾತು ಬರಬಾರದು. ಮಾತು ಬಂದ ಮೇಲೆ ಅದಕ್ಕೆ ಸಾಕ್ಷಿ ಕೊಡಬೇಕು. ಗುಪ್ತಚರ ಇಲಾಖೆಯ ಅವರ ಕೈಯಲ್ಲೇ ಇದೆ. ಜನರ ಮುಂದೆ ನೇರವಾಗಿ ಹೇಳಿ ನಿಮ್ಮ ಶಾಸಕರಿಗೆ ಆಫರ್ ಕೊಟ್ಟಿದ್ದು ಯಾರು ಅಂಥ. ಎಸ್.ಟಿ ಸೋಮಶೇಖರ್ ಗೆ ವೋಟ್ ಹಾಕಿಸಿಕೊಳ್ಳಲು ಎಷ್ಟು ನೂರು ಕೋಟಿ ಕೊಟ್ರಿ. ಶಿವರಾಂ ಹೆಬ್ಬಾರ್ ವೋಟ್ ಹಾಕದಂತೆ ತಡೆಯಲು ಎಷ್ಟು ಹಣ ಕೊಟ್ರಿ. ಮೊದಲು ಅದನ್ನು ಹೇಳಿ ನೀವು ಎಂದು ಮಾಜಿ‌ ಸಚಿವ ಕೆ.ಎಸ್.ಈಶ್ವರಪ್ಪ  ಟಾಂಗ್ ನೀಡಿದರು.

Key words: Pro-Pak –announcement-bomb blast –case-Former Minister-KS Eshwarappa

website developers in mysore

Font Awesome Icons

Leave a Reply

Your email address will not be published. Required fields are marked *