ಗುಂಡ್ಲುಪೇಟೆ: ಯಾರು ಇಲ್ಲದ ವೇಳೆ ಮನೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಈಗ ರೈತರ ಜಮೀನಿಗೆ ನುಗ್ಗಿ ಕೇಬಲ್ ವೈರ್ ಗಳನ್ನ ತುಂಡರಿಸಿ ಕದ್ದೊಯ್ಯುತ್ತಿದ್ದಾರೆ ಕಳ್ಳರ ಕುಠಿಲತನಕ್ಕೆ ರೈತರು ಬೇಸತ್ತು ಹೋಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಮಹದೇವ ಎಂಬ ರೈತನ ಜಮೀನಿಗೆ ನುಗ್ಗಿದ ಕಳ್ಳರು ಸರಿಸುಮಾರು 400 ಮೀಟರ್ ಕೇಬಲ್ ವಯರ್ ಕದ್ದು ಹೋಗಿದ್ದಾರೆ. ಇತ್ತೀಚಿಗೆ ರೈತರ ಜಮೀನುಗಳಿಗೆ ರಾತ್ರಿ ವೇಳೆ ನುಗ್ಗುವ ಕಳ್ಳರು ಕೇಬಲ್ ವೈರ್ ಗಳನ್ನ ಕತ್ತರಿಸಿ ಹೊತ್ತೊಯ್ಯುತ್ತಿದ್ದಾರೆ.
ರಾತ್ರಿ ವೇಳೆ ಕಾವಲು ಇರದ ಜಮೀನುಗಳ ಇಂಚಿಂಚೂ ಮಾಹಿತಿ ಕಲೆಹಾಕುವ ಖದೀಮರು ರೈತಾಪಿ ವರ್ಗಕ್ಕೆ ನಷ್ಟವನ್ನುಂಟು ಮಾಡುತ್ತಿದ್ದಾರೆ. ಮೊದಲೇ ಮಳೆ ಬೆಳೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೇಬಲ್ ಕಳ್ಳರು ತಲೆನೋವಾಗಿ ಪರಿಣಮಿಸಿದ್ದಾರೆ.