ಸಿಎಂ ಕುರ್ಚಿ ಫೈಟ್: ನಾನೂ ಸ್ಪರ್ಧಿಸ್ತೀನಿ ಎಂದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ದಾವಣಗೆರೆ,ಸೆಪ್ಟಂಬರ್,11,2024 (www.justkannada.in):  ರಾಜ್ಯದಲ್ಲಿ ಸಿಎಂ ಬದಲಾವಣೆ, ಮುಂದಿನ ಸಿಎಂ ಬಗ್ಗೆ ಚರ್ಚೆಯಾಗುತ್ತಲೇ ಇದ್ದು ಇದೀಗ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸಹ ತಾನೂ ರೇಸ್ ನಲ್ಲಿದ್ದೀನಿ ಎಂಬ ಸುಳಿವು ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಶಾಸಕ ಶಾಮನೂರು ಶಿವಶಂಕರಪ್ಪ, ಸಿಎಂ ಬದಲಾವಣೆ ಪ್ರಸಂಗ ಬಂದ್ರೆ ನಾನೂ ಸ್ಪರ್ಧಿಸುತ್ತೇನೆ. ಜೂನಿಯರ್ ಸೀನಿಯರ್ ಎಂಬ ಪ್ರಶ್ನೆ ಬರಲ್ಲ. ಅಂತಹ ಪರಿಸ್ಥಿತಿ ಬಂದ್ರೆ  ಸಿಎಂ ಸ್ಥಾನಕ್ಕೆ  ಸ್ಪರ್ಧೆ ಮಾಡದೆ ಬಿಡಲ್ಲ ಎಂದು ಹೇಳಿದ್ದಾರೆ.

ಹೈಕಮಾಂಡ್ ಆಶೀರ್ವಾದ ಇರುವವರೆಗೂ ಸಿದ್ದರಾಮಯ್ಯ ಸಿಎಂ ಆಗಿರಲಿ. ಬಹುಮತವಿರುವವರಿಗೆ ಹೈಕಮಾಂಡ್  ತೀರ್ಮಾನ ಮಾಡುತ್ತದೆ. ಒಂದು ವೇಳೆ ಸಿಎಂ ಬದಲಾವಣೆಯಾದರೇ ನಾನು ಸ್ಪರ್ಧೆ ಮಾಡುತ್ತೇನೆ ಎಂದರು.

Key words: CM, Change, MLA Shamanur Shivshankarappa, contest

Font Awesome Icons

Leave a Reply

Your email address will not be published. Required fields are marked *