ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 12.5 ಲಕ್ಷ ರೂ. ಗೆದ್ದ ಕಾರ್ಕಳ ಮೂಲದ ಡಾ. ಶ್ರೀಶ್ ಶೆಟ್ಟಿ

ಉಡುಪಿ: ಕೌನ್‌ ಬನೇಗಾ ಕರೋಡ್‌ಪತಿ (ಕೆಬಿಸಿ) ಯಲ್ಲಿ ಕರಾವಳಿ ಮೂಲದ ಕಾರ್ಕಳ ತಾಲೂಕಿನ ನಿಂಜೂರು ಮೂಡುಮನೆಯ ಡಾ. ಶ್ರೀಶ್‌ ಸತೀಶ್‌ ಶೆಟ್ಟಿ ಅವರು 12.5 ಲಕ್ಷ ರೂ. ಗೆದ್ದುಕೊಂಡಿದ್ದಾರೆ.

ಅ. 10 ಮತ್ತು 11 ರಂದು ಸೋನಿ ಟಿವಿಯಲ್ಲಿ ಅವರ ಸಂಚಿಕೆ ಪ್ರಸಾರಗೊಂಡಿದೆ. ಶ್ರೀಶ್ ಸತೀಶ್ ಶೆಟ್ಟಿಯವರು 12 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟಿದ್ದರು. 13ನೇ ಪ್ರಶ್ನೆಯಾಗಿ 1971ರ ಮುಂಬೈ ಉತ್ತರಪೂರ್ವ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಯ ಹೆಸರು ಕೇಳಲಾಗಿತ್ತು.

ಜನರಲ್ ಕೆ.ಎಂ. ಕಾರ್ಯಪ್ಪ, ವಿಜಯ ತೆಂಡೂಲ್ಕರ್‌, ಪಂ. ಭೀಮಸೇನ್‌ ಜೋಷಿ ಹಾಗೂ ರಾಜ್‌ ಕಪೂರ್‌ ಆಯ್ಕೆ ನೀಡಲಾಗಿತ್ತು. ಆ ಉತ್ತರದ ಬಗ್ಗೆ ಸ್ಪಷ್ಟತೆ ಇರದೇ ಇದ್ದುದರಿಂದ ಸ್ಪರ್ಧೆಯಿಂದ ಹಿಂದೆ ಸರಿದು 12.5 ಲ.ರೂ. ಗೆದ್ದುಕೊಂಡಿದ್ದಾರೆ.

ಡಾ. ಶ್ರೀಶ್‌ ಸತೀಶ್‌ ಶೆಟ್ಟಿ ಅವರು ಪಳ್ಳಿ-ನಿಂಜೂರು ಮೂಡುಮನೆ ಶ್ರಿವಲ್ಲಿ ಶೆಟ್ಟಿ ಮತ್ತು ಸುರತ್ಕಲ್‌ ದೇವಿ ನಿಲಯ ಸತೀಶ್‌ ಶೆಟ್ಟಿಯವರ ಪುತ್ರನಾಗಿದ್ದು, ಪ್ರಸ್ತುತ ಗುಜರಾತ್‌ನ ಅಹಮದಾಬಾದ್‌ ನಲ್ಲಿ ನೆಲೆಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *