ಬೆಂಗಳೂರು: ಕ್ಯಾಬ್ ಚಾಲಕನೋರ್ವ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಸಾಯಿಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ಈ ದುರ್ಘಟನೆ ನಡೆದಿದೆ. ನೇಣಿಗೆ ಕೊರಳೊಡ್ಡಿದ ಕ್ಯಾಬ್ ಚಾಲಕನನ್ನು ಅವಿನಾಶ್ ಎಂದು ಗುರುತಿಸಲಾಗಿದೆ.
38 ವರ್ಷದ ಅವಿನಾಶ್ ಪತ್ನಿ ಮಮತಾ (30) ಮಗಳಾದ ಅಧೀರಾ (5), ಎರಡೂವರೆ ವರ್ಷದ ಮಗ ಅಣ್ಣಯ್ಯನನ್ನು ಸಾಯಿಸಿದ್ದಾನೆ. ಅವಿನಾಶ್ ಗುಲ್ಬರ್ಗ ಮೂಲದವನಾಗಿದ್ದು, ನರಸಪ್ಪ ಎಂಬುವವರ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಿದ್ದನು.
ಅವಿನಾಶ್ ಸಹೋದರ ಉದಯ್ ಎಂಬಾತ ದೂರು ನೀಡಿದ ಹಿನ್ನೆಲೆ ಪರಿಶೀಲಿಸಿದಾಗ ನಾಲ್ವರು ನೇಣಿಗೆ ಶರಣಾದ ಪ್ರಕರಣ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಿಶೀಲನೆ ನಡೆಸುತ್ತಿದ್ದಾರೆ.