ಉಡುಪಿ: ನಿರ್ಗತಿಕರ ಸೇವಾ ಕೈಂಕರ್ಯದಲ್ಲಿ ನಿರತವಾಗಿರುವ ಕೋರ್ಟ್ ರಸ್ತೆಯ ಹೊಸಬದುಕು ಆಶ್ರಮಕ್ಕೆ ದಾನಿಗಳು ಅಗತ್ಯ ವಸ್ತುಗಳನ್ನು ನೀಡಿ ಪ್ರೋತ್ಸಾಹಿಸಿದರು.
ಉದ್ಯಮಿ ಮಹಮ್ಮದ್ ಆಸಿಫ್ ಇಕ್ಬಾಲ್ ಅವರು 100 ಊಟದ ತಟ್ಟೆ ಹಾಗೂ 100 ಲೋಟವನ್ನು ಕೊಡುಗೆಯಾಗಿ ನೀಡಿದರು. ಉದ್ಯಮಿಗಳಾದ ಮುರಳೀಧರ ಬಲ್ಲಾಳ ಮತ್ತು ಗಿರಿಜಾ ಸರ್ಜಿಕಲ್ ವ್ಯವಸ್ಥಾಪಕರು ರವಿ ಶೆಟ್ಟಿ ಹಾಸಿಗೆಗಳನ್ನು ಹಸ್ತಾಂತರ ಮಾಡಿದರು.
ವಸ್ತುರೂಪದ ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಗಿರಿಯಾಸ್ ಮಳಿಗೆಯ ವ್ಯವಸ್ಥಾಪಕರಾದ ರತನ್, ಹಾಗೂ ದಾನಿಗಳು ಉಪಸ್ಥಿತರಿದ್ದರು. ಆಶ್ರಮ ಸಂಚಾಲಕ ವಿನಯಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಸ್ವಾಗತಿಸಿದರು.