ಮಂಗಳೂರು: ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯದ ವಾರ್ಷಿಕ ತೀರ್ಥಸ್ನಾನವನ್ನು ಉದ್ಘಾಟಿಸುವ ಕುರಿತು ಇಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಶ್ರೀ ನೆಲ್ಲಿತರ್ಥ ಗುಹಾಲಯದಲ್ಲಿ ನಾಳೆ ಅಂದರೆ 17 ರಂದು ನಡೆಯುವ ಗುಹಾ ಪ್ರವೇಶದ ಬಗ್ಗೆ ವಿವರವನ್ನು ನೆರೆದಿದ್ದ ಗಣ್ಯರು ವಿವರಿಸಿದರು. ಶ್ರೀ ಹರಿಕೃಷ್ಣ ಪುನರೂರು, ಶ್ರೀ ಪ್ರದೀಪ್ಕುಮಾರ್ಕಲ್ಕೂರ ಹಾಗೂ ಶ್ರೀ ಭುವನಾಭಿರಮ ಉಡುಪರು ಗುಹೆ ಹಾಗೂ ಕ್ಷೇತ್ರದ ಪೌರಾಣಿಕ ಮಹತ್ಮೆಯನ್ನು ವಿವರಿಸಿ, ಭಕ್ತರು ಈ ಗುಹಾ ಸ್ನಾನ ಹಾಗೂ ಅದರಿಂದ ಒದಗುವ ಮಾನಸಿಕ, ಬೌದ್ದಿಕ ಹಾಗೂ ಆರೋಗ್ಯದ ಲಾಭವನ್ನು ವಿವರಿಸಿದರು.
ನಾಳೆ ನಡೆಯುವ ಗುಹಾಪ್ರವೇಶವನ್ನು ಗಂಟೆ ೯.೩೦ ಕ್ಕೆ ಚಿತ್ರಾಪುರ ಮಠದ ಶ್ರೀಗಳಾದ ವಿದ್ಯೇಂದ್ರ ತರ್ಥ ಸ್ವಾಮಿಗಳು ಉದ್ಘಾಟಿಸಲಿದ್ದಾರೆ. ತರ್ಥ ಸ್ನಾನವು ಬೆಳಿಗ್ಗೆ ೭.೩೦ ರಿಂದ ಮಧ್ಯಾಹ್ನ ೧ ಗಂಟೆಯ ವರೆಗೆ ತರ್ಥ ಸ್ನಾನದ ಅವಕಾಶ ಇದೆಯೆಂದು ಕ್ಷೇತ್ರದ ಸಮಿತಿಯ ಸದಸ್ಯರಾದ ಶ್ರೀ ಪ್ರಸನ್ನ ಭಟ್ ತಿಳಿಸಿದರು.
ಈ ಸಭೆಯಲ್ಲಿ ದೇವಳದ ಜರ್ಣೋದ್ಧಾರ ಸಮಿತಿಯ ಸದಸ್ಯರಾದ ಶ್ರೀ ಎನ್.ವೆಂಕಟರಾಜ್ ಭಟ್, ಹಾಗೂ ದೀಪ್ ಕಿರಣ್ ಕರಂಬಾರ್, ಅವರು ಉಪಸ್ಥಿತರಿದ್ದರು, ಶ್ರೀ ಎನ್.ವಿ.ಜಿ.ಕೆ. ಭಟ್ ರವರು ಸ್ವಾಗತ ಕೋರಿ ಕಡೆಗೆ ವಂದನರ್ಪಣೆ ಮಾಡಿದರು.