ಜನ್ಮ ದಿನದ ಸಂಭ್ರಮದಲ್ಲಿ ಚಂದನವನದ ನಟ ರಮೇಶ್ ಅರವಿಂದ್

ಚಂದನವನದ ಚಿರಯೌವ್ವನ ನಟ ಎಂದರೆ ನಟ ರಮೇಶ್​ ಅರವಿಂದ್​. ತ್ಯಾಗಮಯಿ ಪಾತ್ರಗಳಿಂದಲೇ ಜನಪ್ರಿಯರಾದ ನಟ ರಮೇಶ್​ ಇಂದಿಗೂ ಕೂಡ ಬೇಡಿಕೆಯ ನಟ. ರಮೇಶ್​ ಇಂದು ಹುಟ್ಟುಹಬ್ಬ ಸಂಭ್ರಮದಲ್ಲಿದ್ದು, ಅವರಿಗೆ ಅಭಿನಂದನಗಳ ಮಹಾಪೂರ ಹರಿದು ಬಂದಿದೆ.

ಕೆ ಬಾಲಚಂದರ್​ ನಿರ್ದೇಶನದ ಸುಂದರ ಸ್ವಪ್ನಗಳು ಚಿತ್ರದ ಮೂಲಕ ರಮೇಶ್​ ಅರವಿಂದ್​ ಸ್ಯಾಂಡಲ್​ವುಡ್​ನಲ್ಲಿ ಮಿಂಚಲು ಶುರುಮಾಡಿದರು. ಕೇವಲ ನಟನೆ ಮಾತ್ರವಲ್ಲದೇ ರಾಮ ಶಾಮ ಭಾಮದಂತಹ ಅನೇಕ ಚಿತ್ರಗಳನ್ನು ನಿರ್ದೇಶಿಸಿ, ನಿರ್ದೇಶಕ ಪಟ್ಟವನ್ನು ರಮೇಶ್​ ಗಳಿಸಿದರು. ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲಿಯೂ ತಮ್ಮ ಛಾಪು ಮೂಡಿಸಿದವರು ರಮೇಶ್​​.

ಅತ್ಯಂತ ಚತುರ, ವಾಕ್ಚತುರ್ಯ ಹೊಂದಿರಿವ ರಮೇಶ್​ ಮಾತಿಗೆ ಸೋಲಿಲ್ಲದವರಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಮಿಂಚಿದ್ದಾರೆ ಇವರು. ಸದಾ ಹಸನ್ಮುಖಿ ಗುಣದಿಂದಲೇ ಎದುರಿರುವವರನ್ನು ಸೋಲಿಸಬಲ್ಲ ನಟ ರಮೇಶ್​ ಎಂದರೆ ತಪ್ಪಲ್ಲ. ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನಡೆಸಿ ಮನೆ ಮಾತಗಿದ್ದಾರೆ.

ಇನ್ನು ಸೆಲೆಬ್ರಿಟಿಗಳ ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಘೋಷಣೆ ಆಗುತ್ತವೆ. ಅದೇ ರೀತಿ ರಮೇಶ್ ಅರವಿಂದ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರಕ್ಕೆ ‘ದೈಜಿ’ ಎಂದು ಶೀರ್ಷಿಕೆ ಇಡಲಾಗಿದೆ. ಇದು ರಮೇಶ್ ಅವರ 106ನೇ ಸಿನಿಮಾ.  ‘ದೈಜಿ ಸಿನಿಮಾ ಹಾರರ್, ಮಿಸ್ಟರಿ ಶೈಲಿಯಲ್ಲಿ ಮೂಡಿ ಬರುತ್ತಿದೆ. ಈ ವರ್ಷ ಡಿಸೆಂಬರ್ ಅಥವಾ 2024ರ ಜನವರಿ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ಇದರ ಕಥೆ ಅಮೆರಿಕದಲ್ಲೇ ಸಾಗಲಿದೆ.

 

Font Awesome Icons

Leave a Reply

Your email address will not be published. Required fields are marked *