ವರ್ತೂರು ಸಂತೋಷ್‌ ಬಿಗ್‌ ಬಾಸ್‌ ಮನೆಯಲ್ಲಿ ಬೇಡ ಎಂದು ನಾಮಿನೇಟ್‌

ಬೆಂಗಳೂರು: ಕಳೆದ ವಾರ ರಾಜ್ಯದಲ್ಲಿ ಭಾರಿ ಸುದ್ದಿಯಾಗಿದ್ದ ಹುಲಿ ಉಗುರು ಪ್ರಕರಣದಲ್ಲಿ ಜೈಲು ಸೇರಿದ್ದವರ್ತೂರು ಸಂತೋಷ್‌ ಅವರು ಜಾಮೀನು ಪಡೆದು ಮತ್ತೆ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ಆದರೆ ಬಿಗ್‌ ಬಾಸ್‌ ಸ್ಪರ್ಧಿಗಳು ಸಂತೋಷ್‌ ಮನೆಯಿಂದ ಹೊರ ಹೋಗಬೇಕು ಎಂದು ನಾಮಿನೇಟ್‌ ಮಾಡಿದ್ದಾರೆ.

ಒಂದು ವಾರಗಳ ಕಾಲ ಬಿಗ್‌ ಬಾಸ್‌ ಮನೆಯಲ್ಲಿ ಸಂತೋಷ್‌ ಇರಲಿಲ್ಲ. ಈ ವೇಳೆ ಹಲವು ಟಾಸ್ಕ್‌ ನಡೆದಿದೆ. ತೀವ್ರ ಸ್ಪರ್ಧೆ ನಡುವೆಯೂ ಹಲವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೋರಾಟ ಮಾಡಿದ್ದಾರೆ. ಈ ವೇಳೆ ಸಂತೋಷ್‌ ಇರಲಿಲ್ಲ. ಆದರೆ ಈಗ ಮತ್ತೆ ಬಂದಿರುವ ವರ್ತೂರು ಮನೆಯಲ್ಲಿರುವುದು ಸರಿಯಲ್ಲ ಎಂದು ಹಲವು ಅಭ್ಯರ್ಥಿಗಳು ಹೇಳಿದ್ದಾರೆ.

ಸಂಗೀತಾ, ವಿನಯ್‌, ಸ್ನೇಹಿತ್‌, ಸೇರಿದಂತೆ ಹಲವರು ವರ್ತೂರು ಎಲಿಮಿನೇಷನ್‌ ಗೆ ನಾಮಿನೇಟ್‌ ಮಾಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *