ಗದಗ: ಬ್ಯಾನರ್ ಅಳವಡಿಸುವಾಗ ಮೂವರು ಫ್ಯಾನ್ಸ್ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ನಟ ಯಶ್ ಅವರು ಗದಗದ ಸೂರಣಗಿ ಗ್ರಾಮಕ್ಕೆ ತಲುಪಿ ಮನೆಯವರೊಂದಿಗೆ ಸಾಂತ್ವನ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಯಶ್ ನಮ್ಮ ಮೇಲೆ ಅಭಿಮಾನ ತೋರಿಸೋ ಭರದಲ್ಲಿ ನಿಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ, ನನ್ನ ಬರ್ತ್ಡೇಯಿಂದ ಯಾರಿಗೂ ತೊಂದರೆ ಆಗಬಾರದು ಎಂದು ಆಚರಿಸಿಕೊಂಡಿಲ್ಲ ಎಂದು ಯಶ್ ಅವರು ಬೇಸರಲ್ಲಿಯೇ ಹೇಳಿದ್ದಾರೆ.
ಏನು ಹೇಳಿದರು ಆ ತಂದೆ ತಾಯಿಗೆ ಮಗ ತಿರುಗಿ ಬರುತ್ತಾನಾ? ಎಲ್ಲ ಹುಡಗರು 25 ವರ್ಷಗಳ ಒಳಗಿನವರು. ಅಭಿಮಾನ ತೋರಿಸೋದರಲ್ಲಿ ಈ ಬ್ಯಾನರ್ ಕಟ್ಟೋದು, ಬೈಕ್ ಚೇಸ್ ಮಾಡಿಕೊಂಡು ಬಂದು ಫೋಟೋ ತೆಗೆಯೋದು ಎಲ್ಲ ಬಿಟ್ಟು ಬಿಡಿ. ನಿಜವಾಗಲು ನಿಮ್ಮ ಪ್ರೀತಿ ತೋರಿಸಬೇಕು ಅಂದರೆ ನಿಮ್ಮ ಜೀವನಕ್ಕೆ ಒಳ್ಳೆಯದನ್ನು ಮಾಡಿಕೊಳ್ಳಿ ಅಷ್ಟು ಸಾಕು. ದಯವಿಟ್ಟು ಈ ರೀತಿ ಯಾರು ಮಾಡಬಾರದು ಎಂದು ಹೇಳಿದರು.