ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಮೂರು ಕರುಗಳ ರಕ್ಷಣೆ

ಉಡುಪಿ: ಬೈಲೂರು ಮಹಿಷಮರ್ಧಿನಿ ದೇವಸ್ಥಾನದ ಬಳಿ ಕೆಲವು ದಿನಗಳಿಂದ ಅಸಹಾಯಕ ಸ್ಥಿತಿಯಲ್ಲಿದ್ದ ಮೂರು ಗಂಡು ಕರುಗಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು, ರಕ್ಷಿಸಿ ಕೊಡವೂರು ಪೇಜಾವರ ಮಠದ ಗೋಶಾಲೆಯಲ್ಲಿ ಆಶ್ರಯ ಒದಗಿಸಿದ್ದಾರೆ. ಕಾರ್ಯಚರಣೆಗೆ ಜೋಸ್ ಆಲುಕಾಸ್ ಆಭರಣ ಮಳಿಗೆಯ ಸಿಬ್ಬಂದಿಗಳಾದ ಕಿರಣ್, ಜಯಂತ್ ನೆರವಾದರು.


ರಸ್ತೆಯಲ್ಲಿ ಕರುಗಳು ಸಂಚರಿಸುತ್ತಿದ್ದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಗುದಲ್ಲದೆ, ಅಪಘಾತಕ್ಕೂ ಕಾರಣವಾಗಿತ್ತು. ಕರುಗಳಿಗೆ ಮೇವು, ನೀರಿನ ಸಮಸ್ಯೆ, ಗೋಗಳ್ಳರ ಭೀತಿಯೂ ಎದುರಾಗಿತ್ತು. ಈ ಬಗ್ಗೆ ಸ್ಥಳೀಯರು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದ್ದರು. ಬಳಿಕ ಅವರ ವಿನಂತಿಗೆ ಸ್ಪಂದಿಸಿದ ಪೇಜಾವರ ಮಠ ನೆರವಿಗೆ ಬಂದಿತು.

Font Awesome Icons

Leave a Reply

Your email address will not be published. Required fields are marked *