ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ: ಸವಾರ ಸಾವು

ಕಾಸರಗೋಡು: ಕಾರು ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ರವಿವಾರ ಸಂಜೆ ಉಪ್ಪಳ ಸಮೀಪದ  ಸೋಂಕಾಲ್ ನಲ್ಲಿ ನಡೆದಿದೆ.

ಮೀಂಜ ಕಜೆಮೂಲೆಯ ಮುಹಮ್ಮದ್ ( 35) ಮೃತ ಪಟ್ಟವರು. ಗೋವಾದಲ್ಲಿ  ಕೆಲಸ ನಿರ್ವಹಿಸುತ್ತಿದ್ದ ಮುಹಮ್ಮದ್ ಎರಡು ದಿನಗಳ  ಹಿಂದೆಯಷ್ಟೇ ಊರಿಗೆ ಬಂದಿದ್ದರು. ಸ್ನೇಹಿತರೊಬ್ಬರನ್ನು ಸೋಂಕಾಲ್ ಕೊಡಂಗೈಯಲ್ಲಿರುವ ಮನೆಗೆ ತಲುಪಿಸಿ ಮರಳುತ್ತಿದ್ದಾಗ  ಈ ಅಪಘಾತ ನಡೆದಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಮುಹಮ್ಮದ್ ರನ್ನು ಉಪ್ಪಳದ  ಆಸ್ಪತ್ರೆಗೆ ತಲಪಿಸಿದರೂ  ಜೀವ ಉಳಿಸಲಾಗಳಿಲ್ಲ.  ಮಂಜೇಶ್ವರ ಠಾಣಾ ಪೊಲೀಸರು ಮಹಜರು ನಡೆಸಿದರು. ಮೃತ ದೇಹವನ್ನು ಮಂಗಲ್ಪಾಡಿಯಲ್ಲಿರುವ ತಾಲೂಕು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.

Font Awesome Icons

Leave a Reply

Your email address will not be published. Required fields are marked *