ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ ವ್ಯವಹಾರಗಳನ್ನ ನಡೆಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ತಾತ್ಕಾಲಿಕ ಸಮಿತಿಯನ್ನ ರಚಿಸಿದೆ. ಭೂಪಿಂದರ್ ಸಿಂಗ್ ಬಜ್ವಾ ಸಮಿತಿಯ ನೇತೃತ್ವ ವಹಿಸಿದ್ದು, ಎಂ.ಎಂ. ಸೋಮಯ್ಯ ಮತ್ತು ಮಂಜುಷಾ ಕನ್ವರ್ ಸದಸ್ಯರಾಗಿದ್ದಾರೆ.
ಅಂದ್ಹಾಗೆ, ಬ್ರಿಜ್ ಭೂಷಣ್ ಸರನ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ನಂತರ ಕೇಂದ್ರ ಸರ್ಕಾರ ಕುಸ್ತಿ ಫೆಡರೇಶನ್ ಅಮಾನತುಗೊಳಿಸಿತ್ತು. ಇದಾದ ಕೆಲವು ದಿನಗಳ ನಂತರ ಕೇಂದ್ರ ಸರ್ಕಾರ ತಾತ್ಕಾಲಿಕ ಕುಸ್ತಿ ಸಮಿತಿಯನ್ನ ರಚಿಸಿದೆ.