ಕೋರ್ಟ್ ಗೆ ಹಾಗೂ ವಕೀಲರಿಗೆ ಧನ್ಯವಾದ ತಿಳಿಸಿದ ಶ್ರೀಕಾಂತ್ ಪೂಜಾರಿ ಮಗ

ಹುಬ್ಬಳ್ಳಿ: ನಮ್ಮ ತಂದೆಗೆ ಜಾಮೀನು ದೊರೆತಿರುವುದು ಖುಷಿ ತಂದಿದೆ. ಕೋರ್ಟ್ ಗೆ ಹಾಗೂ ವಕೀಲರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಶ್ರೀಕಾಂತ್ ಪೂಜಾರಿ ಮಗ ಮಂಜುನಾಥ ಪೂಜಾರಿ ಅಭಿನಂದನೆ ಸಲ್ಲಿಸಿದರು.

ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಮ್ಮ ತಂದಗೆ ಆರೋಗ್ಯದ ಸಮಸ್ಯೆಯಿದೆ. ಈ ನಿಟ್ಟಿನಲ್ಲಿ ಜಾಮೀನು ದೊರೆತಿರುವುದು ನಿಜಕ್ಕೂ ಖುಷಿಯನ್ನು ತಂದಿದೆ. ಅಲ್ಲದೇ ಅವರ ಅನಾರೋಗ್ಯದ ಸಂದರ್ಭದಲ್ಲಿ ಕೋರ್ಟ್ ಆದೇಶ ಸ್ವಾಗತಾರ್ಹವಾಗಿದೆ ಎಂದರು.

ಹಳೆಯ ಪ್ರಕರಣದಲ್ಲಿ ನಮ್ಮ ತಂದೆಯನ್ನು ಬಂಧಿಸಿದ್ದು, ಈಗ ಕೋರ್ಟ್ ಆದೇಶದಿಂದ ನಮ್ಮ ತಂದೆಗೆ ಜಯ ಸಿಕ್ಕಿದೆ. ಇದಕ್ಕೆ ಕೋರ್ಟಗೆ ಹಾಗೂ ವಕೀಲರಿಗೆ ಧನ್ಯವಾದಗಳು ಎಂದು ಅವರು ಹೇಳಿದರು.

Font Awesome Icons

Leave a Reply

Your email address will not be published. Required fields are marked *