ಕೋಲಾರ ‘ಕೈ’ ಟಿಕೆಟ್ ಕಗ್ಗಂಟು: ಅಳಿಯನಿಗೆ ಟಿಕೆಟ್ ಕೊಡಿಸಲು ಸಚಿವ ಮುನಿಯಪ್ಪ ಲಾಬಿ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್




kannada t-shirts

ಬೆಂಗಳೂರು, ಮಾರ್ಚ್ 22,2024(www.justkannada.in):  ಲೋಕಸಭೆ ಚುನಾವಣೆಗೆ ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ನಿನ್ನೆ ಬಿಡುಗಡೆಯಾಗಿದ್ದು, ಇನ್ನು ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಬೇಕಿದೆ. ಈ ಮಧ್ಯೆ ಕೋಲಾರ ಕ್ಷೇತ್ರದ ಟಿಕೆಟ್ ಕಗ್ಗಂಟಾಗಿದ್ದು ತಮ್ಮ ಅಳಿಯ  ಚಿಕ್ಕಪೆದ್ದಣ್ಣಗೆ ಟಿಕೆಟ್ ಕೊಡಿಸಲು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಲಾಬಿ ನಡೆಸಿದ್ದಾರೆ.

ಇಂದು ಕೆಪಿಸಿಸಿ ಅಧ್ಯಕ್ಷ ಹಾಗೂ  ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನ ಭೇಟಿಯಾದ ಸಚಿವ ಕೆ.ಎಚ್ ಮುನಿಯಪ್ಪ,  ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಅಳಿಯ ಚಿಕ್ಕಪೆದ್ದಣ್ಣಗೆ ನೀಡುವಂತೆ ಒತ್ತಡ ಹೇರಿದ್ದಾರೆ. ಇಷ್ಟೇ ಅಲ್ಲದೆ, ಹೈಕಮಾಂಡ್ ನಾಯಕರಿಗೂ ಈಗಾಗಲೇ ಮಾಡಿದ್ದಾರೆ ಎನ್ನಲಾಗಿದೆ.

ಡಿ.ಕೆ ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ನನ್ನ ಅಳಿಯನಿಗೂ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೇನೆ. ಕೋಲಾರದಲ್ಲಿ ಮತ್ತೆ ಕಾಂಗ್ರೆಸ್ ಗೆಲ್ಲಬೇಕು. ರಮೇಶ್ ಕುಮಾರ್ ಸೇರಿದಂತೆ ಯಾರ ವಿರುದ್ದವೂ ಮಾತನಾಡಿಲ್ಲ. ಸಚಿವ ಸ್ಥಾನ ನೀಡಬೇಡಿ ಟಿಕೆಟ್ ನೀಡಬೇಡಿ ಎಂದು ಹೇಳಲ್ಲ.   ಭಿನ್ನಾಭಿಪ್ರಾಯ ಸರಿಪಡಿಸಿಕೊಂಡು ಹೋಗುತ್ತೇವೆ. ಕೆ. ಆರ್ ರಮೇಶ್ ಕುಮಾರ್ ಗೆಲ್ಲಬೇಕು ಎಂದು ಬಯಸಿದ್ದೆ.  ಯಾರು ನನ್ನ ಸೋಲಿಸಿದ್ರು ಅವರನ್ನೂ ಗೆಲ್ಲಬೇಕು ಎಂದಿದ್ದೆ ನನ್ನನ್ನ ಸೋಲಿಸಿದವರಿಗೂ ಒಳ್ಳೇಯದನ್ನೇ ಬಯಸಿದ್ದೆ ಎಂದರು.

ನನ್ನ ಅಳಿಯನಿಗೂ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೇನೆ . ಈ ಬಾರಿ ಯಾರೇ ಅಭ್ಯರ್ಥೀಯಾದರೂ ಪಕ್ಷಕ್ಕೆ ಕೆಲಸ ಮಾಡಬೇಕು ಎಂದು ಸಚಿವ ಮುನಿಯಪ್ಪ ತಿಳಿಸಿದರು.

Key words: Kolar-congress- ticket – Minister –Muniappa- son-in-law.

website developers in mysore






Previous article‘ವೀಕ್ ಸಿಎಂ’: ಬಿಜೆಪಿ ನಾಯಕರ ಟೀಕೆಗೆ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ತಿರುಗೇಟು.


Font Awesome Icons

Leave a Reply

Your email address will not be published. Required fields are marked *