ಜ. 22 ರಂದು ರಾಜ್ಯದಲ್ಲಿ ಮಾಂಸ ಮತ್ತು ಮೀನು ಮಾರಾಟ ನಿಷೇಧ: ಯೋಗಿ ಆದಿತ್ಯನಾಥ್

ಲಕ್ನೋ: ಜನವರಿ 22 ರಂದು ರಾಜ್ಯದಲ್ಲಿ ಮದ್ಯ, ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವುದಾಗಿ ಯೋಗಿ ಆದಿತ್ಯನಾಥ್  ನೇತೃತ್ವದ ಉತ್ತರ ಪ್ರದೇಶ  ಸರ್ಕಾರ ಗುರುವಾರ ಘೋಷಿಸಿದೆ.

ಮಧ್ಯಾಹ್ನ 12.20ಕ್ಕೆ ‘ಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ ದೀಕ್ಷಿತ್ ನೆರವೇರಿಸುವರು. ಸಮಾರಂಭವು ಜನವರಿ 22 ರಂದು ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಹೆಲಿಕಾಪ್ಟರ್ ಸೇವೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯಾ ಧಾಮಕ್ಕಾಗಿ ಮಹತ್ವದ ಉಪಕ್ರಮವನ್ನು ಅನಾವರಣಗೊಳಿಸಿದ್ದಾರೆ, ಭಗವಾನ್ ರಾಮನ ಭಕ್ತರಿಗೆ ಮತ್ತು ಪ್ರವಾಸಿಗರಿಗಾಗಿ ಹೆಲಿಕಾಪ್ಟರ್ ಸೇವೆಗಳನ್ನು ಪರಿಚಯಿಸಿದ್ದಾರೆ. ಯೋಗಿ ಸರ್ಕಾರದ ನೇತೃತ್ವದಲ್ಲಿ, ರಾಜ್ಯದ ಆರು ಜಿಲ್ಲೆಗಳಿಂದ ಹೆಲಿಕಾಪ್ಟರ್ ಸೇವೆಗೆ ಅನುಕೂಲವಾಗುವಂತೆ ಸಂಪೂರ್ಣ ಸಿದ್ಧತೆಗಳು ನಡೆಯುತ್ತಿವೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ 7,000 ಕ್ಕೂ ಹೆಚ್ಚು ಜನರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *