ತಿರುಪತಿ: ಡಿಸೆಂಬರ್‌ನಲ್ಲಿ ತಿರುಮಲ ಹುಂಡಿಗೆ ಹಣದ ಮಳೆ

ತಿರುಪತಿ: ತಿರುಪತಿಯಲ್ಲಿ ವರ್ಷದ ಕೊನೆಯಲ್ಲಿ ಹಾಗೂ ಹೊಸ ವರ್ಷದ ಆರಂಭದ ಮೊದಲ ದಿನಕ್ಕೆ ವೈಕುಂಠ ದ್ವಾರ ದರ್ಶನ ಮುಕ್ತಾಯಗೊಂಡಿದೆ. ಈ ವೇಳೆ ಲಕ್ಷಾಂತರ ಭಕ್ತರು ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಿಮ್ಮಪ್ಪನ ದರ್ಶನ ಪಡೆದು ಪುನೀತರಾಗಿದ್ದಾರೆ.

ಸದ್ಯ ಟಿಟಿಡಿ ಡಿಸೆಂಬರ್ ತಿಂಗಳ ತಿಮ್ಮಪ್ಪನ ಹುಂಡಿಯ ಆದಾಯವನ್ನು ಬಹಿರಂಗ ಪಡಿಸಿದೆ.

ಕಳೆದ ಡಿಸೆಂಬರ್ ತಿಂಗಳು ತಿರುಮಲ ಶ್ರೀಗಳಿಗೆ ಮತ್ತೊಮ್ಮೆ ಹಣದ ಸುರಿಮಳೆ ಸುರಿದಿದೆ. ಕಳೆದ ತಿಂಗಳು (ಡಿಸೆಂಬರ್ 2023) 19.16 ಲಕ್ಷ ಭಕ್ತರು ಶ್ರೀಗಳ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಹುಂಡಿ ಕಾಣಿಕೆ ರೂಪದಲ್ಲಿ 116.73 ಕೋಟಿ ರೂಪಾಯಿ ಸಂಗ್ರಹವಾಗಿದೆ. ಡಿಸೆಂಬರ್ ನಲ್ಲಿ 1,46,000 ಶ್ರೀವಾರಿ ಲಡ್ಡು ಪ್ರಸಾದ ಮಾರಾಟವಾಗಿದೆ.

ಕಳೆದ ತಿಂಗಳು 40.77 ಲಕ್ಷ ಭಕ್ತರು ತಿರುಮಲದಲ್ಲಿ ಶ್ರೀವಾರಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಕಲ್ಯಾಣಕಟ್ಟೆಯಲ್ಲಿ 6.87 ಲಕ್ಷ ಭಕ್ತರು ತಾಲನಿಲ ಸಮರ್ಪಿಸಿ ಪೂಜೆ ಸಲ್ಲಿಸಿದ್ದಾರೆ. 2022ರ ಮಾರ್ಚ್‌ನಿಂದ ಇಲ್ಲಿಯವರೆಗೆ ಪ್ರತಿ ತಿಂಗಳು ತಿರುಮಲ ಶ್ರೀವಾರಿಯ ಆದಾಯ 100 ಕೋಟಿ ರೂಪಾಯಿಗಳ ಗಡಿ ತಲುಪಿದೆ.

ಶ್ರೀವಾರಿ ದೇವಸ್ಥಾನದ ವೈಕುಂಠ ದ್ವಾರದಿಂದ 10 ದಿನಗಳಲ್ಲಿ 6,47,452 ಭಕ್ತರು ಶ್ರೀಗಳ ದರ್ಶನ ಪಡೆದಿದ್ದಾರೆ.

Font Awesome Icons

Leave a Reply

Your email address will not be published. Required fields are marked *