ದರ್ಶನ್ ಬಗ್ಗೆ ಮತ್ತೊಮ್ಮೆ ನೇರ ಮಾತುಗಳಲ್ಲಿ ಹೇಳಿದ ಕಿಚ್ಚ ಸುದೀಪ್

ಬೆಂಗಳೂರು: ಸ್ಯಾಂಡಲ್​ವುಡ್​ನ ಇಬ್ಬರು ಸ್ಟಾರ್ ನಟರಾದ ಕಿಚ್ಚ ಸುದೀಪ್ ಹಾಗೂ ದರ್ಶನ್ ನಡುವೆ ವೈಮನಸ್ಸು ಶುರುವಾದಾಗಿನಿಂಲೂ ಅವರು ಒಂದಾಗುವ ಬಗ್ಗೆ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ. ಅಷ್ಟಕ್ಕೂ ಇವರು ಯಾವಾಗ ತಮ್ಮ ಸಮಸ್ಯೆಗಳನ್ನು ಸಾಲ್ವ್ ಮಾಡುತ್ತಾರೆ? ಈ ಒಂದು ಪ್ರಶ್ನೆ ನಟ ಕಿಚ್ಚ ಸುದೀಪ್ ಅವರಿಗೆ #askkichcha ಸೆಷನ್​ನಲ್ಲಿ ಎದುರಾಗಿದೆ. ನಟ ಈ ಒಂದು ಪ್ರಶ್ನೆಗೆ ಉತ್ತರ ಕೂಡಾ ಕೊಟ್ಟಿದ್ದಾರೆ.

ಸಮಸ್ಯೆ ಏನು ಅಂತ ಇಬ್ಬರೂ ಹುಡುಕುತ್ತಾ ಇದ್ದೀವಿ ಎಂದು ನಗುವ ಎಮೋಜಿಯನ್ನು ಹಾಕಿದ್ದಾರೆ ಕಿಚ್ಚ ಸುದೀಪ್. ಸರ್ ನಿಮ್ಮ ಮತ್ತೆ ದರ್ಶನ್ ಅವರದ್ದು ಸಮಸ್ಯೆಯನ್ನು ಯಾವಾಗ ಸಾಲ್ವ್ ಮಾಡಿಕೊಳ್ಳುತ್ತೀರಾ? ಇನ್ನು ಎಷ್ಟು ಟೈಮ್ ಗೊಳ್ತೀರಾ ಎಂದು ಕರುನಾಡಿನದ ಕುವರ ವಿಷ್ಣು ಎನ್ನುವ ಟ್ವೀಟರ್ ಅಕೌಂಟ್​ನಿಂದ ಟ್ವೀಟ್ ಮಾಡಲಾಗಿದೆ.

ಅಂತೂ ಕಿಚ್ಚ ಅವರು ಈ ಒಂದು ಪ್ರಶ್ನೆಗೂ ಉತ್ತರ ಕೊಟ್ಟಿದ್ದಾರೆ. ತಮ್ಮಿಬ್ಬರ ನಡುವಿನ ಸಮಸ್ಯೆ ಏನೆಂಬುದನ್ನು ಇಬ್ಬರು ಹುಡುಕುತ್ತಿರುವುದಾಗಿ ಹೇಳಿದ್ದಾರೆ.

ಸುದೀಪ್ ಎನ್ನುವ ನೆಟ್ಟಿಗರೊಬ್ಬರು ಕಿಚ್ಚ ಹಾಗೂ ದರ್ಶನ್ ಅವರ ಫೋಟೋ ಪೋಸ್ಟ್ ಮಾಡಿ ದಾಸ ದರ್ಶನ್ ಬಗ್ಗೆ ಒಂದು ಮಾತು ಹೇಳಿ ಎಂದು ಕೇಳಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಅವರು ಎಮೋಜಿ ಮೂಲಕವೇ ಅಪ್ಪುಗೆ ಕೊಟ್ಟಿದ್ದಾರೆ. ಹಗ್ ಮಾಡುವ ಎಮೋಜಿಯನ್ನು ಹಾಕಿ ಎಂದಿಗೂ ಅವರಿಗೆ ಒಳ್ಳೆಯದನ್ನೇ ಬಯಸುತ್ತೇನೆ ಎಂದಿದ್ದಾರೆ.

Font Awesome Icons

Leave a Reply

Your email address will not be published. Required fields are marked *