ಢಾಕಾ: ಬಾಂಗ್ಲಾದೇಶದ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರನ್ನು ಸೋಮವಾರ ದೋಷಿ ಎಂದು ಘೋಷಿಸಲಾಗಿದೆ.
ಯೂನಸ್ ಮತ್ತು ಗ್ರಾಮೀಣ ಟೆಲಿಕಾಂನ ಮೂವರು ಸಹೋದ್ಯೋಗಿಗಳು ಕಾರ್ಮಿಕರ ಕಲ್ಯಾಣ ನಿಧಿಯನ್ನು ಸ್ಥಾಪಿಸಲು ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ ಆರೋಪವನ್ನು ಎದುರಿಸಿದರು.
ಪ್ರೊಫೆಸರ್ ಯೂನಸ್ ಮತ್ತು ಅವರ ಗ್ರಾಮೀಣ್ ಟೆಲಿಕಾಂನ ಮೂವರು ಸಹೋದ್ಯೋಗಿಗಳಿಗೆ ಕಾರ್ಮಿಕ ಕಾನೂನಿನ ಅಡಿಯಲ್ಲಿ ಆರು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಲಾಯಿತು ಎಂದು ಪ್ರಾಸಿಕ್ಯೂಟರ್ ಖುರ್ಷಿದ್ ಆಲಂ ಖಾನ್ ಎಎಫ್ಪಿಗೆ ತಿಳಿಸಿದರು.
83ರ ಹರೆಯದ ಯೂನಸ್ ಅವರು ತಮ್ಮ ಕಿರುಬಂಡವಾಳ ಬ್ಯಾಂಕ್ನ ಮೂಲಕ ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿದ್ದಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ.
2006 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರ ಸಿಕ್ಕಿತ್ತು.