ಪಕ್ಷದ ನಿರ್ಧಾರ ಲೆಕ್ಕಿಸದೆ ಅಯೋಧ್ಯೆಗೆ ಹೊರಟ ಹರ್ಭಜನ್ ಸಿಂಗ್

ಪ್ರಾಣಪ್ರತಿಷ್ಠಾಪನೆಯಂದು ರಾಮಮಂದಿರಕ್ಕೆ ಹೋಗದಿರಲು ಕಾಂಗ್ರೆಸ್‌ ನಿರ್ಧರಿಸಿರುವಾಗ INDIA ಮೈತ್ರಿ ಕೂಟದಲ್ಲಿ ಒಂದಾದ AAPನ ಸಂಸದ ಹರ್ಭಜನ್ ಸಿಂಗ್ ತಾವು ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ದಾರೆ. ಅವರ ಈ ಹೇಳಿಕೆಯ ಬಗ್ಗೆ ಹಲವು ರೀತಿಯ ಚರ್ಚೆಗಳು ಶುರುವಾಗಿವೆ.

ʼನಾನು ದೇವರನ್ನು ನಂಬುತ್ತೇನೆ ಹಾಗು ಅಯೋಧ್ಯೆಗೆ ಹೋಗುವುದು ನನ್ನ ವೈಯಕ್ತಿಕ ನಿರ್ಧಾರ. ಕಾಂಗ್ರೆಸ್ ಅಥವ ಬೇರೆ ಪಕ್ಷಗಳ ನಿರ್ದಾರದ ಬಗ್ಗೆ ನನಗೆ ಗೊತ್ತಿಲ್ಲʼ ಎಂದು ಸಿಂಗ್ ಹೇಳಿದ್ದಾರೆ.

ಕಾರ್ಯಕ್ರಮದ ಆಹ್ವಾನ ಸ್ವೀಕರಿಸಿ ಮಾತನಾಡಿದ ಅವರು, ಜ.೨೨ ಭಾರತೀಯರಿಗೆಲ್ಲ ದೊಡ್ಡದಿನ. ಅಂದು ನಾನೂ ನಿಮ್ಮಂತೆ ರಾಮಲಲ್ಲಾನನ್ನು ಭೇಟಿಯಾಗಲಿದ್ದೇನೆ. ಇದೊಂದು ಐತಿಹಾಸಿಕ ದಿನವಾಗಿದ್ದು, ಜಗತ್ತಿನ ಕನಸು ನನಸಾಗಲಿದೆʼ ಎನ್ನುತ್ತಾ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *