ಬಾಲರಾಮನ ಮೂರ್ತಿಗೆ ದೀಪ ಬೆಳಗಿದ ಕಿಚ್ಚ ಸುದೀಪ್ : ವಿಡಿಯೋ ವೈರಲ್

ಬೆಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ಸಂಭ್ರಮದಲ್ಲಿ ಜನರು ತಮ್ಮ ಮನೆಯಲ್ಲಿ ದೀಪಗಳನ್ನು ಬೆಳಗಿಸಿದ್ದಾರೆ.

ನಟ ಕಿಚ್ಚ ಸುದೀಪ್ ಅವರು ಕೂಡ ತಮ್ಮ ಮನೆಯಲ್ಲಿ ಬಾಲ ರಾಮನ ಮೂರ್ತಿಗೆ ದೀಪ ಬೆಳಗಿ ಪೂಜೆ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.

ಅವನ ತೋಳುಗಳೇ ನಮ್ಮ ಬಲ, ಅವನ ಎದೆಯೇ ನಮ್ಮ ಮಹತ್ವಾಕಾಂಕ್ಷೆ, ಅವನ ಕೈಗಳು ನಮ್ಮ ಶೌರ್ಯ, ಅವನ ಪಾದ ನಮ್ಮ ಪಾಲಿಗೆ ಮೋಕ್ಷ, ಅವನ ರೂಪದಲ್ಲಿ, ಎಲ್ಲಾ ಸೃಷ್ಟಿಯ ಸಾರವಿದೆ. ಎಲ್ಲವೂ ಇಲ್ಲಿಂದಲೇ ಆರಂಭವಾಗುತ್ತದೆ. ಇಲ್ಲಿಂದಲೇ ನಮ್ಮ ಏಳಿಗೆ ಶುರು, 500 ವರ್ಷಗಳ ಅಂಧಕಾರದ ಬಳಿಕ ಒಂದು ರಾಷ್ಟ್ರದ ಪ್ರಾಣಪ್ರತಿಷ್ಠೆಯಾಗಿದೆ, ದೇಶದ ಜನರ ಪ್ರಾಣಪ್ರತಿಷ್ಠೆಯಾಗಿದೆ- ಜೈಶ್ರೀರಾಂ ಎಂದು ಸುದೀಪ್ ಟ್ವೀಟ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *