ಮಹಿಂದ್ರಾರ ಮೆಚ್ಚುಗೆಗೆ ಕೃತಜ್ಞತೆ ಸಲ್ಲಿಸಿ, ಟೀಕೆಗಳಿಗೆ ಉತ್ತರಿಸಿದ ʼಪಾನಿಪುರಿವಾಲಿʼ

ನವದೆಹಲಿ: ʼಬೆಕೆಟ್ ಪಾನಿಪುರಿವಾಲಿʼ ಎಂದು ಜನಪ್ರಿಯರಾಗಿರುವ ತಾಪ್ಸಿ ಉಪಾಧ್ಯಾಯ ತಮ್ಮ ಕೆಲಸವನ್ನು ಶ್ಲಾಘಿಸಿದ ಆನಂದ್ ಮಹಿಂದ್ರಾಗೆ ಧನ್ಯವಾದ ತಿಳಿಸಿದ್ದಾರೆ.

ತಮ್ಮ ಬಂಡಿ ಎಳೆಯಲು ಸ್ಕೂಟಿ ಬಳಸುತ್ತಿದ್ದ ತಾಪ್ಸಿ ಕಳೆದ ನವೆಂಬರ್ ನಲ್ಲಿ ಖರೀದಿಸಿದ ಮಹೀಂದ್ರಾ ಥಾರ್ ಕಾರ್ ಆ ಕೆಲಸಕ್ಕೆ ಬಳಸತೊಡಗಿದಮೇಲೆ ಜನರಿಂದ ನಾನಾತರಹದ ಟೀಕೆಗಳು ಬರತೊಡಗಿದ್ದವು.

ಹೀಗಿರುವಾಗ ಆಕೆಯನ್ನು ಹುರಿದುಂಬಿಸಲೆಂದು ಆನಂದ್ ಮಹಿಂದ್ರಾ ಒಂದು ಪೋಸ್ಟ್ ಮಾಡಿದ್ದು, ಅದಕ್ಕೆ ತಾಪ್ಸಿ ಧನ್ಯವಾದ ತಿಳಿಸಿದ್ದಾರೆ. ʼವೀಡಿಯೋ ಹಂಚಿಕೊಂಡು ನನ್ನ ಕೆಲಸವನ್ನು ಶ್ಲಾಘಿಸುವ ಮೂಲಕ ಆನಂದ್ ಮಹಿಂದ್ರಾ ನನ್ನಲ್ಲಿ ಉತ್ಸಾಹ ಮೂಡಿಸಿದರು. ಇಂತಹ ಹೆಸರಾಂತ ವ್ಯಕ್ತಿ ನನ್ನನ್ನು ಗಮನಿಸಿ ಮೆಚ್ಚಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆʼ ಎಂದು ತಾಪ್ಸಿ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *