ಯುವರಾಜ್‌ಕುಮಾರ್‌ ಭಾವುಕ ಮಾತು – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಹೊಸಪೇಟೆ: ಅಪ್ಪು ಅವರ ನೆಚ್ಚಿನ ಹಾಗೂ ಪ್ರಿಯ ಸ್ಥಳ ಹೊಸಪೇಟೆ ನಗರ ಹೀಗಾಗಿ ಅವರ ಸವಿನೆನಪಿಗೆ ಡಾ.ರಾಜ್‌ ಕುಟುಂಬದ ಕುಡಿ ಯುವರಾಜ್‌ಕುಮಾರ್‌ ʻಯುವʼ ಚಿತ್ರದ ಪ್ರೀ ರಿಲೀಸ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಚಂದನವನದ ದೊಡ್ಮೆನೆಯ ಹೊಸ ಕುಡಿ ಬೆಳ್ಳೆ ತೆರೆ ಮೇಲೆ ಗ್ರ್ಯಾಂಡ್​ ಎಂಟ್ರಿಕೊಡಲು ರೆಡಿಯಾಗಿದೆ.ಕಾರ್ಯಕ್ರದಲ್ಲಿ ಅಪ್ಪು ಅಭಿಮಾನಿಗಳು ಕಿಕ್ಕಿರಿದು ತುಂಬಿ ಅಪ್ಪು ಅಪ್ಪು ಎಂದು ಜಯಘೋಷದ ಮೂಲಕ ಕಾರ್ಯಕ್ರಮವನ್ನು ಹುರಿದುಂಬಿಸಿದ್ದರು.

ಹೊಸಪೇಟೆಯ ಪುನೀತ್​ ರಾಜ್​ಕುಮಾರ್​ ಕ್ರೀಡಾಂಗಣ, ಸಂಪೂರ್ಣ ಅಪ್ಪು ಮಯವಾಗಿತ್ತು. ಪುನೀತ್​ ರಾಜ್​ಕುಮಾರ್​ ಅವರ ನೆಚ್ಚಿನ ತಾಣವಾದ ಹೊಸಪೇಟೆಯಲ್ಲಿ ಯುವ ಚಿತ್ರದ ಪ್ರೀ ರಿಲೀಸ್​ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್, ರಾಘವೇಂದ್ರ ರಾಜ್ ಕುಮಾರ್ ದಂಪತಿ ಹಾಗೂ ಯುವ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಚಿತ್ರತಂಡ ಸಂಭ್ರಮದಲ್ಲಿ ಭಾಗಿಯಾಗಿತ್ತು.

ಯುವರಾಜ್‌ಕುಮಾರ್‌ ಕಾರ್ಯಕ್ರಮದಲ್ಲಿ ಮಾತನಾಡಿ,ಅಪ್ಪ-ಅಮ್ಮ ಇಲ್ಲಿ ತನಕ ಸಾಕಿ ಬೆಳೆಸಿದ್ದಾರೆ. ಅವರೇ ನನಗೆಲ್ಲ. ಆದರೆ ಇವತ್ತು ಅವರು ನನ್ನನ್ನು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಇನ್ಮುಂದೆ ನೀವೆ ನನ್ನ ತಂದೆ, ತಾಯಿಯಂದಿರು. ನೀವೇ ಕರೆದುಕೊಂಡು ಹೋಗಬೇಕು. ನೀವು ಎಲ್ಲಿ ಕರೆದುಕೊಂಡು ಹೋಗ್ತಿರಾ ಎನ್ನುವುದು ನಿಮಗೆ ಬಿಟ್ಟಿರುವುದು ಎಂದು ಹೆಳುತ್ತಾ ಭಾವುಕರಾದರು.

ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಾನು ಇರುವವರೆಗೆ ನಾನು ಮಾಡಿರುವ ನನ್ನ ಪ್ರತಿ ಸಿನಿಮಾ ಅಪ್ಪು ಸರ್​ಗೆ ಅರ್ಪಣೆ. ಇದು ದೊಡ್ಮನೆಯ ಹೊಸ ಅಧ್ಯಾಯ. ಮುಂದೆ ಹೊಸಪೇಟೆ-ವಿಜಯನಗರದಿಂದ ಅಪ್ಪು ನಗರ ಆಗಬಹುದು. ಸಿನಿಮಾ ಗೆಲ್ಲಿಸಿ ಎಂದು ಮನವಿ ಮಾಡಿದರು. ಅಲ್ಲದೇ ಈ ಚಿತ್ರ ದಲ್ಲಿ ಸಪ್ತಮಿಗೌಡ ಬೇರೆ ಲುಕ್‌ನಲ್ಲಿ ನಿಮ್ಮ ಮುಂದೆ ಬರಲಿದ್ದಾರೆ ಎಂದರು

Font Awesome Icons

Leave a Reply

Your email address will not be published. Required fields are marked *