ರಾಮ, ಸೀತೆ ಮತ್ತು ಲಕ್ಷ್ಮಣನ ದೇವಾಲಯ ನಿರ್ಮಿಸಿ ಮೋದಿ, ಯೋಗಿ ಪ್ರತಿಮೆ ಕಾವಾಲಿಗಿರಿಸಿದ ಭೂಪ

ಗುಜರಾತಿನಲ್ಲಿ ಗುಜರಿ ವಸ್ತು ವ್ಯಾಪಾರಿಯೊಬ್ಬ ಭಾರೀ ಚಾಣಾಕ್ಷತನ ಮೆರೆದಿದ್ದಾನೆ. ಈತನನ್ನು ಮೋಹನ್‌ಲಾಲ್ ಗುಪ್ತಾ ಎಂದು ಗುರುತಿಸಲಾಗಿದ್ದು, ಈತನ ಅನಧಿಕೃತ ಕಟ್ಟಡವೊಂದನ್ನು ನೆಲಸಮಗೊಳಿಸುವುದಾಗಿ ಭರೂಚ್-ಅಂಕಲೇಶ್ವರ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಹೇಳಿದ್ದರು.
Photo Credit :
News Kannada

ಭರೂಚ್: ಗುಜರಾತಿನಲ್ಲಿ ಗುಜರಿ ವಸ್ತು ವ್ಯಾಪಾರಿಯೊಬ್ಬ ಭಾರೀ ಚಾಣಾಕ್ಷತನ ಮೆರೆದಿದ್ದಾನೆ. ಈತನನ್ನು ಮೋಹನ್‌ಲಾಲ್ ಗುಪ್ತಾ ಎಂದು ಗುರುತಿಸಲಾಗಿದ್ದು, ಈತನ ಅನಧಿಕೃತ ಕಟ್ಟಡವೊಂದನ್ನು ನೆಲಸಮಗೊಳಿಸುವುದಾಗಿ ಭರೂಚ್-ಅಂಕಲೇಶ್ವರ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಹೇಳಿದ್ದರು.

ಕಳೆದ ವರ್ಷ ಖರೀದಿಸಿದ ಕಟ್ಟಡದಲ್ಲಿ ಹೆಚ್ಚುವರಿ ಮಹಡಿ ನಿರ್ಮಿಸಿದ ಮೋಹನ್‌ಲಾಲ್ ಗುಪ್ತಾ, ಈಗ ರಾಮ, ಸೀತೆ ಮತ್ತು ಲಕ್ಷ್ಮಣನ ವಿಗ್ರಹಗಳಿರುವ “ದೇವಾಲಯ” ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ ಮೇಲ್ಛಾವಣಿ ದೇಗುಲದ ಹೊರಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೋಲುವ ಪ್ರತಿಮೆಗಳನ್ನು ಇಟ್ಟಿದ್ದಾರೆ.

ಉತ್ತರ ಪ್ರದೇಶ ಮೂಲದ ಗುಪ್ತಾ ಅವರು ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಜನವರಿ 22 ರಂದು ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಹೊಂದಿಕೆಯಾಗುವಂತೆ ಉದ್ದೇಶಿತ ಅಕ್ರಮ ಸ್ಕ್ರ್ಯಾಪ್ ಗೋಡೌನ್ ಮೇಲಿನ ದೇವಾಲಯವನ್ನು ಉದ್ಘಾಟಿಸಿದ್ದಾರೆ. ಆದರೆ ಇದನ್ನು ಪೂರ್ವಾನುಮತಿ ಇಲ್ಲದೆ ನಿರ್ಮಿಸಲಾಗಿದ್ದು, ಇದರ ವಿರುದ್ಧ ಅಧಿಕಾರಿಗಳು ಕ್ರಮು ಕೈಗೊಳ್ಳಲು ಮುಂದಾಗಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದೆ.

ಹನಿ ಹನಿ ಕೂಡಿ ಹಳ್ಳ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

This site is protected by reCAPTCHA and the Google
Privacy Policy and
Terms of Service apply.

44

News Kannada

The most exciting, trusted and preferred news websites of Karnataka and Kannadigas around the world.

Read More Articles

Font Awesome Icons

Leave a Reply

Your email address will not be published. Required fields are marked *