ಸ್ಮೃತಿ ಮಂದಾನ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಂಗಳೂರು: ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ WPL ಫೈನಲ್​​ನಲ್ಲಿ ಆರ್​ಸಿಬಿ ಕಪ್​​ಗೆ ಮುತ್ತಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಮೊದಲ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್‌ನ ಚಾಂಪಿಯನ್ ಆಯಿತು.

ತಂಡದ ನಾಯಕಿ ಸ್ಮೃತಿ ಮಂದಾನ  ಟ್ರೋಫಿ ಹಿಡಿದು ಮಾತನಾಡುತ್ತ, ನನಗಿನ್ನು ನಂಬಲು ಸಾದ್ಯವಾಗುತ್ತಿಲ್ಲ, ಮಾತಾಡಲು ಅಪದಗಳು ಸಿಗುತ್ತಿಲ್ಲ, ನಮ್ಮ ತಂಡದ ಪ್ರದರ್ಶನ ಶ್ಲಾಘನೀಯವಾಗಿತ್ತು, ಆದರೆ ಮೊದಲಲ್ಲಿ ದೆಹಲಿ ಜೊತೆ ಎರಡು ಕಠಿಣ ಸೋಲು ಕಂಡಿದ್ದೆವು. ಆದರೆ ಫೈನಲ್‌ನಲ್ಲಿ ಕಪ್‌ ನಮ್ಮ ಪಾಲಾಗಿದೆ.ಕಳೆದ ವರ್ಷದ ಸೋಲೆ ಈಗ ನಮ್ಮ ಗೆಲುವಿಗೆ ಕಾರಣ. ಟೀಮ್ ಮ್ಯಾನೇಜ್ಮೆಂಟ್ ಇದು ನಿಮ್ಮ ಟೀಮ್ ಎಂದು ಹೇಳಿತು. ಟ್ರೋಫಿ ನನ್ನ ಒಬ್ಬಳ ಗೆಲವುವಲ್ಲ ಇಡೀ ತಂಡದ ಗೆಲವು ಎಂದು ತಮ್ಮ ಮಾತಿನಿಂದಲೂ ಅಭಿಮಾನಿಗಳ ಮನ ಗೆದ್ದರು.

ಇತ್ತ ಕಡೆ ಅಭಿಮಾನಿ ಗಳ 16 ವರ್ಷದ ಕನಸು ಆರ್‌ಸಿಬಿ ಮಹಿಳಾ ತಂಡ ನೆರವೇರಿಸಿದೆ. ರಾಜಧಾನಿಯಲ್ಲಿ ಆರ್‌ಸಿಬಿ ಫ್ಯಾನ್ಸ್‌ಗಳು ಖುಷಿಯಲ್ಲಿ ಹುಚ್ಚದ್ದು ಕಣಿದು ಕುಪ್ಪಳಿಸಿ ತಮ್ಮ ಸಂತೋಷವನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ನೆನ್ನೆ ರಾತ್ರಿಯಿಂದಲೇ ಬೀದಿ ಬೀದಿಯಲ್ಲಿ ಡಿಜೆ, ಪಟಾಕಿ ಸಿಡಿಸಿ ಕುಣಿಯುತ್ತ ಈ ಬಾರಿ ನಮ್ದು ಎಂದು ಕೂಗುತ್ತಾ ಸಂಭ್ರಸಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *