ಅಮಾವಾಸ್ಯೆ ಹಿನ್ನೆಲೆ: ಮಲೆ ಮಹದೇಶ್ವರ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಚಾಮರಾಜನಗರ,ಮೇ,8,2024 (www.justkannada.in): ಅಮಾವಾಸ್ಯೆ ಪ್ರಯುಕ್ತ  ಇಂದು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೇಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ.

ಮುಂಜಾನೆಯಿಂದಲೇ ಮಾದಪ್ಪನಿಗೆ ವಿಶೇಷ ಪೂಜೆ, ಹೋಮ ಹವನ ಪೂಜಾ ಕೈಂಕರ್ಯಗಳು ನೆರವೇರಿದ್ದು ಬೆಳ್ಳಂ ಬೆಳಗ್ಗೆ ಶ್ರೀ ಕ್ಷೇತ್ರಕ್ಕೆ  ಭಕ್ತಾದಿಗಳು ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಇಷ್ಟಾರ್ಥ ಸಿದ್ದಿಗಾಗಿ ಭಕ್ತರು ಮಾದಪ್ಪ ಮೊರೆ  ಹೋಗಿದ್ದಾರೆ.

ಉಚಿತ ಬಸ್ ವ್ಯವಸ್ಥೆ ಹಿನ್ನಲೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದಿದ್ದು, ಶ್ರೀ ಕ್ಷೇತ್ರಕ್ಕೆ ಜಾತ್ರೆಯಂತೆ ಸಹಸ್ರಾರು ಭಕ್ತರು ಜಮಾಯಿಸಿದ್ದಾರೆ.

Key words: Amavasya, devotees, male mahadeshwara hills

Font Awesome Icons

Leave a Reply

Your email address will not be published. Required fields are marked *