ಕಾಂಗ್ರೆಸ್ ಗೆ ಗ್ಯಾರಂಟಿಗಿಂತ ಪೆನ್ ಡ್ರೈವ್ ಮೇಲೆಯೇ ಆಸಕ್ತಿ-ಬಿವೈ ವಿಜಯೇಂದ್ರ ಲೇವಡಿ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ಮೇ,4,2024 (www.justkannada.in): ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ವಿಶ್ವಾಸ ಕಳೆದುಕೊಂಡು ಪೆನ್ ಡ್ರೈವ್ ಹಿಂದೆ ಬಿದ್ದಿದೆ. ಕಾಂಗ್ರೆಸ್ ಗೆ ಗ್ಯಾರಂಟಿಗಿಂತ ಪೆನ್ ಡ್ರೈವ್ ಮೇಲೆಯೇ ಆಸಕ್ತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ,  ಕಾಂಗ್ರೆಸ್ ನವರಿಗೆ ಮೊದಲೇ ಪೆನ್ ಡ್ರೈವ್ ಸಿಕ್ಕಿತ್ತು.  ಚುನಾವಣೆವರೆಗೆ ಕಾಯ್ದು ಪ್ರಕರಣ ದಾಖಲಿಸಿದ್ದಾರೆ.  ಕಾಂಗ್ರೆಸ್ ನವರು ಮೊದಲು ಇದಕ್ಕೆ ಉತ್ತರ ಕೊಡಬೇಕು. ಈ ಪ್ರಕರಣದಿಂದ ಬಿಜೆಪಿಗೆ ಎಫೆಕ್ಟ್ ಆಗಲ್ಲ. ಇಂಥ ಕೇಸ್ ನಡೆಯಬಾರದು ಇದು ತಲೆ ತಗ್ಗಿಸುವ ವಿಚಾರ ಎಂದರು.

ನಾವು ಯಾರೂ ಪ್ರಜ್ವಲ್ ರೇವಣ್ಣ ಪ್ರಕರಣ ಬೆಂಬಲಿಸಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು. ಬಹಳ ಜವಾಬ್ದಾರಿಯಿಂದ ಈ ಮಾತು ಹೇಳುತ್ತೇನೆ ಗ್ಯಾರಂಟಿ ಮೇಲೆ ವಿಶ್ವಾಸ ಹೋಗಿದೆ. ಹೀಗಾಗಿ ಸರ್ಕಾರ ಪೆನ್ ಡ್ರೈವ್ ಹಿಂದೆ ಬದ್ದಿದೆ ಎಂದು ವ್ಯಂಗ್ಯವಾಡಿದರು.

Key words: Congress, interested, pen drives, BY Vijayendra

Font Awesome Icons

Leave a Reply

Your email address will not be published. Required fields are marked *