ಕೆಲವರಿಗೆ ಗಾಯ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಹೈದರಾಬಾದ್‌:   ದೇವರ’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸಿನಿಮಾ ಶೂಟಿಂಗ್ ವೇಳೆ ತಂಡದ ಮೇಲೆ ಜೇನು ಹುಳುಗಳು ದಾಳಿ ನಡೆಸಿವೆ ಎಂದು ವರದಿ ಆಗಿದೆ. ಇದರಿಂದ ಕೆಲವರು ಆಸ್ಪತ್ರೆ ಸೇರುವಂತಾಗಿದೆ. ಯಾರಿಗೂ ಹೆಚ್ಚಿನ ತೊಂದರೆ ಆಗಿಲ್ಲ ಎಂದು ಮೂಲ ತಿಳಿಸಿದೆ.

ದೊಡ್ಡ ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗುತ್ತಿದ್ದು ಇತ್ತೀಚೆಗೆ ತಂಡ ಶೂಟಿಂಗ್​ನಲ್ಲಿ ಬ್ಯುಸಿ ಆಗಿತ್ತು. ಈ ವೇಳೆ ಜೇನು ಹುಳಗಳಿಂದ ದಾಳಿ ನಡೆದಿದೆ. ಈ ವೇಳೆ ಇಬ್ಬರು ಗಾಯಗೊಂಡ ಬಗ್ಗೆ ವರದಿ ಆಗಿದೆ. ಖುಷಿಯ ವಿಚಾರ ಎಂದರೆ ಶೂಟಿಂಗ್ ಸಂದರ್ಭದಲ್ಲಿ ಮುಖ್ಯ ಪಾತ್ರಧಾರಿಗಳಾದ ಜೂನಿಯರ್ ಎನ್​ಟಿಆರ್​, ಜಾನ್ವಿ ಕಪೂರ್ ಇರಲಿಲ್ಲ. ಹೀಗಾಗಿ ಅವರು ಈ ದಾಳಿಯಿಂದ ಪಾರಾಗಿದ್ದಾರೆ. ಜೇನು ನೊಣದಿಂದ ವಿಳಂಬ ಉಂಟಾಗಿದ್ದು ಏಪ್ರಿಲ್​ನಲ್ಲೇ ರಿಲೀಸ್‌ ಆಗಬೇಕಿದ್ದ‘ದೇವರʼ ಸಿನಿಮಾ ಅಕ್ಟೋಬರ್‌ಗೆ ಮುಂದೂಡಲಾಗಿದೆ.

Font Awesome Icons

Leave a Reply

Your email address will not be published. Required fields are marked *