ಡಿಸಿ ಸಿ. ಸತ್ಯಭಾಮ ಮತ್ತೊಂದು ಸ್ಫೋಟಕ ಮಾಹಿತಿ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಹಾಸನ: ಇದೀಗ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ್ಣಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿದ್ದು ಯಾರಾದ್ರೂ ಸಂತ್ರಸ್ತೆ ಪೊಲೀಸ್​ ರಕ್ಷಣೆ ನೀಡುವಂತೆ ಕೇಳಿದ್ರಾ ಅನ್ನೋ ಪ್ರಶ್ನೆಗೆ ಹಾಸನ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಉತ್ತರ ನೀಡಿದ್ದಾರೆ. ಯಾರು ಇದುವರೆಗೂ ರಕ್ಷಣೆ ಕೊಡಿ ಎಂದು ನನ್ನ ಬಳಿ ಬಂದಿಲ್ಲ. ನಾನು ಆಫೀಸ್​ನಲ್ಲೇ ಇರುತ್ತೇನೆ, ಯಾರು ಬೇಕಾದ್ರೂ ಬಂದು ರಕ್ಷಣೆ ಕೇಳಬಹುದು ಎಂದಿದ್ದಾರೆ.

ನನಗೆ ಸಿಎಂ ಸಿದ್ದರಾಮಯ್ಯ ಆಗಲಿ, ಡಿಸಿಎಂ ಡಿ.ಕೆ ಶಿವಕುಮಾರ್​​ ಅವರಾಗಲಿ ಯಾವುದೇ ಸೂಚನೆ ನೀಡಿಲ್ಲ. ಪ್ರಭಾವಿ ರಾಜಕಾರಣಿಗಳು ಎಂದು ಸರ್ಕಾರದಿಂದ ಯಾವುದೇ ಒತ್ತಡ ಇಲ್ಲ. ನಾವು ಅದಕ್ಕೆ ತಲೆ ಕೂಡ ಕಡೆಸಿಕೊಳ್ಳುವುದಿಲ್ಲ. ಯಾರಿಗಾದ್ರೂ ರಕ್ಷಣೆ ಬೇಕಾದ್ರೆ ನೀಡುತ್ತೇವೆ. ನಾವು ಯಾವುದಕ್ಕೂ ಹೆದರುವುದಿಲ್ಲ ಎಂದರು.

Font Awesome Icons

Leave a Reply

Your email address will not be published. Required fields are marked *