ನವದೆಹಲಿ: ಅಕ್ರಮವಾಗಿ ಮಸೀದಿ ಒಳಗೆ ನುಗ್ಗಿದ ಮೂವರು ಮಾಸ್ಕ್ ಧರಿಸಿದ ದುಷ್ಕರ್ಮಿಗಳು ಅಮಾನುಷವಾಗಿ ದೊಣ್ಣೆಗಳಿಂದ ಹೊಡೆದು ಧರ್ಮಗುರುವನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯು ರಾಜಸ್ಥಾನದ ರಾಮಗಂಜ್ನ ಕಾಂಚನ್ ನಗರದಲ್ಲಿನ ಮಸೀದಿಯಲ್ಲಿ ನಡೆದಿದೆ.
ಧರ್ಮಗುರು ಮೊಹ್ಮದ್ ಮಹೀರ್ (30) ಕೊಲೆಯಾದ ವ್ಯಕ್ತಿ. ಧರ್ಮಗುರು ತನ್ನ 6 ಮಕ್ಕಳೊಂದಿಗೆ ಮಸೀದಿ ಒಳಗೆ ಮಲಗಿಕೊಂಡಿರುತ್ತಾರೆ. ಈ ವೇಳೆ ಮಾಸ್ಕ್ ಧರಿಸಿಕೊಂಡು ಬಂದ ಮೂವರು ಅಪರಿಚಿತ ದುಷ್ಕರ್ಮಿಗಳು ಧರ್ಮಗುರುವಿನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಆಗ ಮಕ್ಕಳು ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದಾಗ ಸೌಂಡ್ ಮಾಡಬಾರದು ಎಂದು ಮಕ್ಕಳಿಗೆ ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಮೊಬೈಲ್ ಅನ್ನು ಕಸಿದುಕೊಂಡು ಮನಸೋಯಿಚ್ಛೆ ಹಲ್ಲೆ ಮಾಡಿ ಧರ್ಮಗುರುವನ್ನು ದೊಣ್ಣೆಗಳಿಂದ ಹೊಡೆದು ಕೊಂದಿದ್ದಾರೆ ಎಂದು ಹೇಳಲಾಗಿದೆ.