ಮಾರ್ಚ್ 13, 14 ಲೋಕಸಭಾ ಚುನಾವಣೆ ಘೋಷಣೆ ಮಾಡುವ ಸಾಧ್ಯತೆ: ಡಿಕೆಶಿ

ಬೆಂಗಳೂರು: ಮಾರ್ಚ್ 13, 14 ಲೋಕಸಭಾ ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಅವರು ಇಂದು ಕೆಂಗೇರಿಯ ಸೂಲಿಕೆರೆ ಗ್ರಾಮದ‌ ಮೈದಾನದಲ್ಲಿ‌ ನೂತನವಾಗಿ ಆಯ್ಕೆಯಾದ ಎಂಎಲ್ ಸಿ ಪುಟ್ಟಣ್ಣ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಮಗೆ ಟೈಮ್ ಇಲ್ಲ, ಕೇಂದ್ರ ಸರ್ಕಾರದವರು ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿದ್ದಾರೆ ಎಂದರು.

ಮಾತು ಮುಂದುವರೆಸಿದ ಅವರು, ಪುಟ್ಟಣ್ಣ ಕರೆದಿದ್ದಕ್ಕೆ ಬಂದಿದ್ದಾರೆ, ಇದು ನಿಮ್ಮ ಗೆಲುವು ಪುಟ್ಟಣ್ಣ ಗೆಲುವು ಅಲ್ಲ. ಎರಡು ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಕ್ಕೆ ಸೋಲಿಸಿದ್ದೀರಿ. ಅದಕ್ಕೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇವೆ. ಬಿಜೆಪಿ-ಜೆಡಿಎಸ್ ಅಪವಿತ್ರ ಮೈತ್ರಿ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.

Font Awesome Icons

Leave a Reply

Your email address will not be published. Required fields are marked *