ಉತ್ತರಾಖಂಡ್: ಡೈನೋಸರ್ಗಳಂತೆ ಕಾಂಗ್ರೆಸ್ ಪಕ್ಷ ಅಳಿವಿನಂಚಿನತ್ತ ಸಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೌಚರ್ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಹೇಳಿದರು.
ʼಕಾಂಗ್ರೆಸ್ ನಾಯಕರು ಒಬ್ಬರಾದಮೇಲೆ ಒಬ್ಬರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಇನ್ನೂ ಕೆಲ ವರ್ಷಗಳಲ್ಲಿ ಕಾಂಗ್ರೆಸ್ ಡೈನೋಸರ್ಗಳಂತೆ ಅಳಿದುಹೋಗುವ ಭೀತಿಯಿದೆ. ೨೦೨೪ರ ನಂತರ ಕಾಂಗ್ರೆಸ್ ಹೆಸರೆತ್ತಿದರೆ ಅದು ಯಾರು ಎಂದು ಮಕ್ಕಳು ಕೇಳಬಹುದುʼ ಎಂದು ರಾಜನಾಥ್ ಸಿಂಗ್ ಕಾಂಗ್ರೆಸ್ ಕಾಲೆಳೆದಿದ್ದಾರೆ.
ಕಾಂಗ್ರೆಸ್ ಒಳಜಗಳವನ್ನು ಉಲ್ಲೇಖಿಸಿದ ಅವರು, ಪ್ರತಿದಿನ ಅವರು ತಮ್ಮಲ್ಲೇ ಜಗಳಾಡಿಕೊಳ್ಲುತ್ತಿದ್ದಾರೆ. ಪಕ್ಷವು ʼಬಿಗ್ ಬಾಸ್ʼ ಮನೆಯಂತಾಗಿದೆ ಎಂದು ಟೀಕಿಸಿದ್ದಾರೆ.
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ಧ್ವನಿಗೆ ಮನ್ನಣೆ ಸಿಗುತ್ತಿದ್ದು, ನಮ್ಮ ಮಾತನ್ನು ಗಂಭಿರವಾಗಿ ಪರಿಗಣಿಸಲಾಗುತ್ತಿದೆ ಎಂದು ಸಿಂಗ್ ಹೇಳಿದರು.