ಮುಂಬೈ: ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತ, ವ್ಯಾಪಕ ಹಾನಿ ಮತ್ತು ನೂರಾರು ಕಟ್ಟಡಗಳ ಕುಸಿತದಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಹೊಸ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದು, ಬಾಲಿವುಡ್ ನಟ ಅಮಿರ್ ಖಾನ್ ಸಹಾಯ ಹಸ್ತ ಚಾಚಿದ್ದಾರೆ.
ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಹಾಯ ಮಾಡಲು ರಚಿಸಲಾಗಿರುವ ‘ಆಪ್ಡಾ ರಹತ್ ಕೋಶ್-2023’ ಗೆ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಆಮಿರ್ ಖಾನ್ ಅವರ ದೇಣಿಗೆ ಮತ್ತು ಸಂಕಷ್ಟದಲ್ಲಿ ಜೊತೆಯಾಗಿ ಬೆಂಬಲ ನೀಡಿದ್ದಕ್ಕಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
“ಈ ನೆರವು ನಿಸ್ಸಂದೇಹವಾಗಿ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳಿಗೆ ಸಹಾಯ ಮಾಡುತ್ತದೆ. ಅಗತ್ಯವಿರುವವರಿಗೆ ತಲುಪುವಂತೆ ನಿಧಿಯನ್ನು ನ್ಯಾಯಯುತವಾಗಿ ಬಳಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.
प्रदेश के आपदा प्रभावित लोगों के साथ अपनी सहानुभूति व्यक्त करते हुए, हिंदी सिनेमा के प्रख्यात अभिनेता आमिर खान जी ने राहत और पुनर्वास कार्य में सहायता के रूप में आपदा राहत कोष में 25 लाख रुपये का योगदान किया है।इस अंशदान के लिए मैं उनका हार्दिक आभार व्यक्त करता हूं।…
— Sukhvinder Singh Sukhu (@SukhuSukhvinder) September 23, 2023