4 ವರ್ಷದ ಮಗುವಿಗೆ ಸಿಗರೇಟ್​ನಿಂದ ಸುಟ್ಟು ಕ್ರೌರ್ಯ ಮೆರೆದ ಮಲತಂದೆ

ಬೆಂಗಳೂರು ಗ್ರಾಮಾಂತರ: 4 ವರ್ಷ ವಯಸ್ಸಿನ ಮಗುವಿನ ಮೇಲೆ ಮಲತಂದೆ ವಾಟರ್ ಹೀಟರ್ ಮತ್ತು ಸಿಗರೇಟ್​ನಿಂದ ಸುಟ್ಟು ಕ್ರೌರ್ಯ ಮೆರೆದ ಘಟನೆ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ.

ಮಲತಂದೆ ಮಂಜುನಾಥ್ ಎಂಬಾತ ಕುಡಿದ ಮತ್ತಿನಲ್ಲಿ ವಾಟರ್ ಹೀಟರ್ ಮತ್ತು ಸಿಗರೇಟ್​ನಿಂದ ಸುಟ್ಟುದ್ದು,  ಮಾತ್ರವಲ್ಲದೆ ಕುಕ್ಕರ್​ನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ.

ಮಗುವಿನ ಮೇಲೆ  ಕಳೆದ ಮೂರ್ನಾಲ್ಕು ತಿಂಗಳಿನಿಂದ ಮಲತಂದೆ ಹಲ್ಲೆ ನಡೆಸಿದ್ದು, ಹೆತ್ತ ತಾಯಿ ಮಂಜುಳಾ ಈ ಬಗ್ಗೆ ಚಕಾರವೆತ್ತಿಲ್ಲ. ಆದ್ರೆ, ಪುಟ್ಟ ಮಗುವಿನ ಮೇಲಿನ ಕ್ರೌರ್ಯ ಕಂಡು ರೋಸಿ ಹೋದ ಸ್ಥಳೀಯರು, ಮಾ.15 ರ ರಾತ್ರಿ ಮಲತಂದೆ ಮಂಜುನಾಥನಿಗೆ ಧರ್ಮದೇಟು ನೀಡಿ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಮಲತಂದೆ ಮಂಜುನಾಥ್, ಪತಿ ಅಕಾಲಿಕ ಸಾವಿನಿಂದ ಇಬ್ಬರು ಮಕ್ಕಳ ಜೊತೆ ಒಂಟಿಯಾಗಿದ್ದ ಮಂಜುಳಾ ಜೊತೆ ವಾಸವಾಗಿದ್ದಾನೆ. ಕುಡಿತದ ಚಟ ಜೊತೆಗೆ ತಮ್ಮ ಖಾಸಗಿ ಕ್ಷಣಗಳಿಗೆ ಮಗು ಅಡ್ಡಿಯೆಂದು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ.

ಮೊನ್ನೆ ಸಹ ಹಲ್ಲೆ ‌ನಡೆಸುತ್ತಿದ್ದಾಗ ಸ್ಥಳೀಯರು ಮಲತಂದೆಗೆ ಧರ್ಮದೇಟು ನೀಡಿ ಮಗುವನ್ನು ರಕ್ಷಣೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಗೋಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಧ್ಯ ಮಗುವನ್ನು ಡಿಸಿಪಿಓ ಸುಪರ್ದಿಗೆ ನೀಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *