ಖರ್ಗೆ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬಿಹಾರ್:‌ ನಮಗೆ ಬಹುಮತ ಬಂದರೆ ಬಾರತದ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ನಾವು ಜನರ ಕಷ್ಟಗಳನ್ನು ದೂರಮಾಡಬಯಸುತ್ತೇವೆ ಎಂದು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ʼಮೋದಿ ಎಲ್ಲರನ್ನೂ ಹೆದರಿಸುತ್ತಿದ್ದಾರೆ. ಇಡಿ, ಆದಾಯ ತೆರಿಗೆ ಇಲಾಖೆಗಳನ್ನು ಹಣದಿಂದ ಅಥವ ಹೆದರಿಸಿ ಬಿಜೆಪಿ ತನ್ನ ಕಡೆ ಮಾಡಿಕೊಂಡಿದೆʼ ಎಂದು ಆರೋಪಿಸಿದ ಖರ್ಗೆ, ಕರ್ನಾಟಕ, ಮಧ್ಯಪ್ರದೇಶ, ಗೋವಾ, ಉತ್ತರಾಖಂಡದ ಜನರು ಅವರನ್ನು ಬೆಂಬಲಿಸಲಿಲ್ಲ. ಆದರೆ ಅವರು ಎಲ್ಲರ ಒಗ್ಗಟ್ಟನ್ನು ಮುರಿದು ತಮ್ಮ ಇಷ್ಟದಂತೆ ನಡೆದುಕೊಂಡಿದ್ದಾರೆ ಎಂದರು.

ಆರ್.ಎಸ್.ಎಸ್‌ ಮುಖಂಡರು ಹಾಗು ಬಿಜೆಪಿಯ ಕೆಲ ನಾಯಕರು ಸಂವಿಧಾನ ಬದಲಾವಣೆಯ ಬಗ್ಗೆ ಮಾತಾಡುವಾಗ ಮೋದಿ ಯಾಕೆ ಸುಮ್ಮನಿರುತ್ತಾರೆ ಎಂದು ಪ್ರಶ್ನಿಸಿದ ಖರ್ಗೆ, ಯಾರಾದರೂ ಇಂತಹ ಮಾತುಗಳನ್ನಾಡಿದರೆ ಅವರಿಗೆ ತಕ್ಕ ಉತ್ತರ ನೀಡಿ ಎಂದು ಜನರಿಗೆ ಕರೆ ನೀಡಿದರು.

Font Awesome Icons

Leave a Reply

Your email address will not be published. Required fields are marked *