ಬೀದರ್ : ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ ಕಳೆದ ಹಲವು ದಿನಗಳಿಂದ ಕ್ಷೇತ್ರದ ಜನರಿಂದ ದೂರವಿದ್ದ ಚವಾಣ್ ಇದೀಗ ಕ್ಷೇತ್ರದಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಔರಾದ್ ತಾಲೂಕಿನ ಬೋಂತಿ ತಾಂಡಾದ ಕಚೇರಿಗೆ ಭೇಟಿ ನೀಡಿ ಕಾಲ ಕಳೆದಿದ್ದಾರೆ. ಹಾಲಿ ಸಂಸದರ ಭಗವಂತ್ ಖೂಬಾಗೆ ಟಿಕೆಟ್ ಸಿಕ್ಕ ಬಳಿಕ ಚುನಾವಣಾ ಪ್ರಚಾರದಿಂದ ಪ್ರಭು ಚವಾಣ್ ದೂರ ಉಳಿದಿದ್ದರು. ಸ್ವಕ್ಷೇತ್ರ ಔರಾದ್ ಬಿಟ್ಟು ಮುಂಬೈನ ನಿವಾಸದಲ್ಲಿ ವಾಸವಾಗಿದ್ದರು. ಇದೀಗ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಮತ್ತೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
ಭಗವಂತ್ ಖೂಬಾ ಪರ ಒಂದು ದಿನವೂ ಶಾಸಕ ಪ್ರಭು ಚವಾಣ್ ಪ್ರಚಾರ ಮಾಡಲಿಲ್ಲ. ಪ್ರಭು ಚೌಹಾಣ್ ಎಲೆಕ್ಷನ್ ಹೊತ್ತಲ್ಲಿ ಖೂಬಾಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದರು. ಎಲೆಕ್ಷನ್ ಮುಕ್ತಾಯದ ಮರು ದಿನವೇ ಚೌಹಾಣ್ ಕ್ಷೇತ್ರಕ್ಕೆ ಮರಳಿದ್ದಾರೆ.