ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೈವೋಲ್ಟೇಜ್ ಕ್ಷೇತ್ರ ಅಫಜಲಪುರಕ್ಕೆ ಆಗಮನ

ಕಲಬುರಗಿ : ಜಿಲ್ಲೆಯ ಬಿಜೆಪಿ ಲೋಕಸಭಾ ಅಭ್ಯರ್ಥಿ ಉಮೇಶ ಜಾಧವ್ ಅವರ ಪ್ರಚಾರ ನಿಮಿತ್ಯ ಜಿಲ್ಲೆಯ ಹೈವೊಲ್ಟೇಜ್ ಕ್ಷೇತ್ರ ಅಫಜಲಪುರ ಪಟ್ಟಣದಲ್ಲಿ ಬಿಜೆಪಿ ಪಕ್ಷದ ಬೃಹತ್ ಸಮಾವೇಶ ನಿತೀನ್ ಗುತ್ತೇದಾರ ನೇತೃತ್ವದಲ್ಲಿ ನಡೆಯಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಕಟ್ಟಾಳು ನಿತೀನ್ ಗುತ್ತೇದಾರ ನಾಳೆ ಅಫಜಲಪುರ ಪಟ್ಟಣದ ಮಹಾಂತೇಶ್ವರ ಕಾಲೇಜು ಆವರಣದಲ್ಲಿ ಸಾಯಂಕಾಲ 5 ಗಂಟೆಗೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರು ಸೇರಿದಂತೆ ರಾಜ್ಯದ ಹಲವು ಗಣ್ಣಯರು ಸೇರಿದಂತೆ ಕಲಬುರಗಿ ಲೋಕಸಭಾ ಅಭ್ಯರ್ಥಿ ಡಾ.ಉಮೇಶ ಜಾಧವ್ ಅವರು ಆಗಮಿಸಲಿದ್ದಾರೆ. ತಾಲೂಕಿನ ಯುವಕರು ಸೇರಿದಂತೆ ಹಿರಿಯರು ಮಹಿಳೆಯರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದರು.

ಕಳೆದ ಬಾರಿಗಿಂತ ಈ ಬಾರಿ ಲೋಕಸಭಾ ಚುನಾವಣೆ ವಿಶೇಷವಾಗಿದ್ದು, ಹಾಲಿ ಮಾಜಿ ಶಾಸಕರು ಒಂದುಗೂಡಿ ಚುನಾವಣೆ ಎದುರಿಸುತ್ತಿದ್ದರೆ,ಇನ್ನೊಂದು ಕಡೆ ತಾಲೂಕಿನ ಜನರೊಂದಿಗೆ ನಾನು ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ನಾನು ಪ್ರಚಾರ ಮಾಡುತ್ತಿದ್ದೆನೆ.ತಾಲೂಕಿನಾಧ್ಯಂತ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಒಲವು ಇದೆ.ಕಳೆದ ಬಾರಿಕಿಂತ್ತಲೂ ಈ ಬಾರಿ ಹೆಚ್ಚಿನ ಮತಗಳು ಬಿಜೆಪಿ ಪಕ್ಷಕ್ಕೆ ಬರುವ ವಿಶ್ವಸವಿದೆ ಎಂದರು. ನಾಳಿನ ಕಾರ್ಯಕ್ರಮ ತಾಲೂಕಿನ ಅಭಿವೃದ್ಧಿಯಡೆಗೆ ಕೊಂಡ್ಯೊಯುವ ನಿಟ್ಟಿನಲ್ಲಿ ಸಮಾವೇಶ ನಡೆಯಲಿದೆ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮನವಿ ಮಾಡಿದರು.

Font Awesome Icons

Leave a Reply

Your email address will not be published. Required fields are marked *