ಮತದಾನ ಮಾಡಿ ಬಂದ ಬಳಿಕ ಬಿದ್ದು ಕೈಮುರಿದುಕೊಂಡ ವೃದ್ದೆ: ಆಸ್ಪತ್ರೆಗೆ ದಾಖಲು. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಏಪ್ರಿಲ್,26,2024 (www.justkannada.in):  ಮತದಾನ ಮಾಡಿ ಹೊರ ಬಂದ ವೇಳೆ ವೃದ್ದೆಯೊಬ್ಬರು ಹಸುಗಳ ಕಾದಾಟದಿಂದ ಹೆದರಿ ಬಿದ್ದು ಕೈಮುರಿದುಕೊಂಡು  ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಕೆ.ಆರ್ ಕ್ಷೇತ್ರದ ಕುವೆಂಪುನಗರ ಎಂ.ಬ್ಲಾಕ್ ಗೋಕುಲ್ ಶಾಲೆಯ ಬೂತ್ ಬಳಿ ಈ ಘಟನೆ ನಡೆದಿದೆ. 76 ವರ್ಷದ ಜಯಮ್ಮ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವುದು.  ಇಂದು ಲೋಕಸಭೆ ಚುನಾವಣೆ ಹಿನ್ನೆಲೆ ಬೆಳಿಗ್ಗೆ 7.30ರ ವೇಳೆಗೆ  ಜಯಮ್ಮ ಅವರು ಗೋಕುಲ್ ಶಾಲೆಯ ಬೂತ್ ಗೆ ತೆರಳಿ ಮತದಾನ ಮಾಡಿದ್ದಾರೆ.

ಬಳಿಕ ಹೊರ ಬಂದಿದ್ದು ಈ ವೇಳೆ ಅಲ್ಲೆ ಪಕ್ಕದಲ್ಲಿ ಎರಡು ಹಸುಗಳು ಕಾದಾಡುತ್ತಿದ್ದಾಗ ಹೆದರಿದ  ಜಯಮ್ಮ ಅವರು ಕೆಳಕ್ಕೆ ಬಿದ್ದಿದ್ದು ಈ ಸಮಯದಲ್ಲಿ ಜಯಮ್ಮ ಅವರ ಕೈಮುರಿದಿದೆ. ತಕ್ಷಣವೇ ಅವರನ್ನ ನಗರದ ಗೋಪಾಲಗೌಡ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮಧ್ಯೆ  ಜಯಮ್ಮ ಅವರಿಗೆ ಕೈ ಆಪರೇಷನ್ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

Key words: woman, voting, After, admitted, hospital

Font Awesome Icons

Leave a Reply

Your email address will not be published. Required fields are marked *