ಯೂಟ್ಯೂಬರ್ ಮನೀಶ್ ಕಶ್ಯಪ್ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಯೂಟ್ಯೂಬರ್ ಮನೀಶ್ ಕಶ್ಯಪ್ ಲೋಕಸಭೆ ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಸನಾತನ ಧರ್ಮಕ್ಕೆ ಅಪಮಾನ ಮಾಡುವವರ ವಿರುದ್ಧ ನನ್ನ ಹೋರಾಟ ಎಂದಿದ್ದಾರೆ. ನಾವು ನಿನ್ನೆ ಮನೋಜ್ ತಿವಾರಿ ಅವರೊಂದಿಗೆ ಬಿಹಾರದಿಂದ ಬಂದಿದ್ದೇವೆ. ಅವರಿಂದಲೇ ನಾನು ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಯಿತು. ನನ್ನ ಜೀವನದ ಕೆಟ್ಟ ದಿನಗಳು ಕೊನೆಗೊಂಡವು. ಹಾಗಾಗಿ ಬಿಜೆಪಿ ಸೇರಿದ್ದೇನೆ.

ನಾವು ಬಿಹಾರವನ್ನು ಬಲಪಡಿಸಬೇಕು. ಲಾಲು ಕುಟುಂಬ ಬಿಹಾರವನ್ನು ಲೂಟಿ ಮಾಡಿ ನಾಶಪಡಿಸಿತು. ನನ್ನ ಹೋರಾಟ ಸನಾತನವನ್ನು ದೂಷಿಸುವವರು ಮತ್ತು ರಾಷ್ಟ್ರೀಯತೆಯ ವಿರುದ್ಧ ಇರುವವರ ವಿರುದ್ಧ ಎಂದು ಮನೀಶ್ ಕಶ್ಯಪ್ ಮಾಹಿತಿ ನೀಡಿದ್ದಾರೆ.

ಮನೋಜ್ ತಿವಾರಿ ಬಿಜೆಪಿಗೆ ಸೇರಿದ ಯೂಟ್ಯೂಬರ್ ಮನೀಶ್ ಕಶ್ಯಪ್ ಬಗ್ಗೆ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾತನಾಡುವ ಮನೀಶ್ ಕಶ್ಯಪ್ ಅವರಂತಹ ವ್ಯಕ್ತಿ ಬಿಜೆಪಿ ಸೇರಿದ್ದಾರೆ. ಅವರು ಬಡವರ ಕಲ್ಯಾಣವನ್ನು ಬಯಸುತ್ತಾರೆ.

ಅವರು ಬಡವರ ಕಲ್ಯಾಣಕ್ಕಾಗಿ ಪ್ರಧಾನಿ ಮೋದಿಯವರೊಂದಿಗೆ ಸೇರಿದ್ದಾರೆ ಎಂದರು. ಪಕ್ಷ ಸೇರಿದ ನಂತರ ಕಶ್ಯಪ್‌ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿದರು.

Font Awesome Icons

Leave a Reply

Your email address will not be published. Required fields are marked *