ರಾಜ್ಯದ ಮುಖ್ಯಮಂತ್ರಿಯಾಗಿ ದತ್ತಾತ್ರೇಯ ದರ್ಶನಕ್ಕೆ‌ ಬರುವೆ ಎಂದ ಡಿಕೆಸಿ

ಕಲಬುರಗಿ: ಈ ಭಾಗದಲ್ಲಿ ದೇವಲ ಗಾಣಗಾಪುರ ದತ್ತ ಮಹಾರಾಜರ ದೇವಸ್ಥಾನ ಪವಿತ್ರವಾಗಿದ್ದು, ಅಪಾರ ಭಕ್ತರನ್ನು ಹೊಂದಿದ್ದಾರೆ. ಅದಕ್ಕಾಗಿ ಈ ದೇವಸ್ಥಾನವನ್ನು ಅಭಿವೃದ್ಧಿ ಮಾಡಲಾಗುವುದು, ತಾವೆಲ್ಲಾ ಅರ್ಚಕರು ನಾನು ಮುಖ್ಯಮಂತ್ರಿ ಆಗಿ ಬರಬೇಕೆಂದು ಆಶೀರ್ವಾದ ನೀಡಿ ಸನ್ಮಾನ ಮಾಡಿದ್ದೀರಿ. ಅದಕ್ಕೆ ದತ್ತಾತ್ರೇಯ ಮಹಾರಾಜರ ಆಶೀರ್ವಾದದಿಂದ ಮುಖ್ಯಮಂತ್ರಿಯಾದರೆ ಮತ್ತೊಮ್ಮೆ ದೇವಸ್ಥಾನಕ್ಕೆ ಬರುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರನ್ನು ಸನ್ಮಾನಿಸಿದ ಅರ್ಚಕರು ಮತ್ತೊಮ್ಮೆ ದೇವಲ ಗಾಣಗಾಪುರಕ್ಕೆ ಮುಖ್ಯಮಂತ್ರಿಯಾಗಿ ಬರಬೇಕು. ತಮಗೆ ದತ್ತಾತ್ರೇಯ ಮಹಾರಾಜರ ಆಶೀರ್ವಾದವಿದೆ ಎಂದರು.

ಪೂಜಾ ಕೈಂಕರ್ಯವನ್ನು ಅರ್ಚಕರಾದ ಉದಯ ಭಟ್ ಪೂಜಾರಿ, ಪ್ರಸನ್ನ ಪಿ. ಪೂಜಾರಿ, ಗಂಗಾಧರ್ ಎಸ್.ಪೂಜಾರಿ, ಪ್ರಫುಲ್ ಪಿ.ಪೂಜಾರಿ, ದೇವಿದಾಸ್ ಎ.ಪೂಜಾರಿ ನೆರವೇರಿಸಿದರು.

Font Awesome Icons

Leave a Reply

Your email address will not be published. Required fields are marked *