ಸುಳ್ಳು ಹೇಳೋದ್ರಲ್ಲಿ ಹೆಚ್.ಡಿಕೆಗೆ ಡಾಕ್ಟರೇಟ್ ಕೊಡಬೇಕು- ‘ಕೈ’ ಅಭ್ಯರ್ಥಿ  ಡಿ.ಕೆ ಸುರೇಶ್ ಕಿಡಿ. » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ರಾಮನಗರ,ಏಪ್ರಿಲ್,19,2024 (www.justkannada.in): ಕನಕಪುರಕ್ಕೆ ನೀವು ಬರಬೇಡಿ ಎಂದು ಡಿಕೆ ಕೇಳಿಕೊಂಡಿದ್ದರೆಂದು ಹೇಳಿಕೆ ಕುರಿತು ಪ್ರತಿಕ್ರಿಯಿಸಿದ  ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್, ಅಂತಹ ನೀಚ ರಾಜಕಾರಣ ಮಾಡುವುದಿಲ್ಲ.ಅಂತಹ ರಾಜಕೀಯ ನಮಗೆ ಬರುವುದಿಲ್ಲ. ಸುಳ್ಳು ಹೇಳೋದ್ರಲ್ಲಿ ಎಚ್ ಡಿ ಕುಮಾರಸ್ವಾಮಿಗೆ ಡಾಕ್ಟರೇಟ್ ಕೊಡಬೇಕು  ಎಂದು ಕಿಡಿಕಾರಿದರು.

ಈ ಕುರಿತು ಇಂದು ಮಾತನಾಡಿದ ಡಿ.ಕೆ ಸುರೇಶ್,  ಡಿಕೆ ಶಿವಕುಮಾರ್ ಗೆ ಅಂತಃ ಸ್ಥಿತಿ ಈ ಹಿಂದೆಯೂ ಬಂದಿಲ್ಲ. ಮುಂದೇನು ಬರುವುದಿಲ್ಲ ಗೌರವ ಕೊಡುತ್ತಿದ್ದೇವೆ ಎಂದು ಬೇರೆ ರೀತಿ ಬಿಂಬಿಸಿಕೊಳ್ಳುವುದು ಸರಿಯಲ್ಲ. ಚರ್ಚೆಗೆ ಸಿದ್ದರಿದ್ದೇವೆ ಚುನಾವಣೆ ನಂತರ ಚರ್ಚೆಗೆ ಬರುತ್ತೇವೆ ಎಂದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಲ್ಲೆಲ್ಲಿ ಕಲ್ಲು ಸಾಗಿಸಿದ್ದಾರೆ.  ಇಳಕಲ್ ನಲ್ಲಿ ಎಲ್ಲೆಲ್ಲಿ ಕಲ್ಲು ಸಾಗಿಸಿದ್ದಾರೆಂದು ಎಲ್ಲಾ ದಾಖಲೆ ಕೊಡುತ್ತೇನೆ, ನಮ್ಮ ವಿರುದ್ಧ ಇಪ್ಪತ್ತು ಕೇಸ್ ಹಾಕಿದ್ದರು ನೆನಪಿದೆ ಅಲ್ಲವಾ? ಎಚ್ ಡಿ ಕುಮಾರಸ್ವಾಮಿ ಬಾಯಿಗೆ ಬಂದ ಹಾಗೆ ಮಾತನಾಡುವುದಲ್ಲ. ಎಚ್ಡಿಕೆ ಬಂದು ಏಕೆ ಕಲ್ಲುಗಣಿಗಾರಿಕೆ ನಡೆಸಿದರು ಎಂದು ಹೇಳುತ್ತೇನೆ ಎಚ್ ಡಿ ಕುಮಾರಸ್ವಾಮಿ ಬೆಳೆಯುವುದಲ್ಲ ಆಲೂಗಡ್ಡೆನಾ? ಎಂದು ವಾಗ್ದಾಳಿ ನಡೆಸಿದರು.

Key words: HDK, doctorate,  lying, DK Suresh

Previous articleಮೈಸೂರು ವಿವಿ : ಹಣ ದುರುಪಯೋಗ, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಚಾರಣಾ ಸಮಿತಿ ನೇಮಕ.

Font Awesome Icons

Leave a Reply

Your email address will not be published. Required fields are marked *